ADVERTISEMENT

ಬೆಂಗಳೂರು ಈಗ ಕೂಲ್ ಕೂಲ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:25 IST
Last Updated 23 ಜೂನ್ 2019, 20:25 IST
ಕಸ್ತೂರಬಾ ರಸ್ತೆಯಲ್ಲಿ ಮಳೆಯ ನಡುವೆ ಕೊಡೆ ಹಿಡಿದು ದ್ವಿಚಕ್ರ ವಾಹನದಲ್ಲಿ ತೆರಳಲು ಪ್ರಯತ್ನಿಸಿದ ಯುವಕ– ಯುವತಿ –ಪ್ರಜಾವಾಣಿ ಚಿತ್ರ
ಕಸ್ತೂರಬಾ ರಸ್ತೆಯಲ್ಲಿ ಮಳೆಯ ನಡುವೆ ಕೊಡೆ ಹಿಡಿದು ದ್ವಿಚಕ್ರ ವಾಹನದಲ್ಲಿ ತೆರಳಲು ಪ್ರಯತ್ನಿಸಿದ ಯುವಕ– ಯುವತಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯಕ್ಕೆ ತಡವಾಗಿ ಕಾಲಿಟ್ಟ ಮುಂಗಾರು ಮಳೆ ನಗರದಲ್ಲಿ ಭಾನುವಾರ ತಂಪೆರೆಯಿತು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಐದು ದಿನ ಸತತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಎರಡು ದಿನ ಮೋಡ ಕವಿದ ವಾತಾವರಣದ ನಡುವೆ‌ಆಗಾಗ ಸೂರ್ಯನ ದರ್ಶನವಾಗುತ್ತಿತ್ತು.

ಭಾನುವಾರ ಮಳೆಯ ಸಿಂಚನವಾಗಿದ್ದು, ವಾತಾವರಣವನ್ನು ಮತ್ತಷ್ಟು ತಂಪಾಗಿಸಿದೆ. ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ ಇತ್ತು. ಇನ್ನೂ ಎರಡು ದಿನ ಇದೇ ರೀತಿಯ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

‘ಎರಡು ದಿನಗಳ ಹಿಂದಿನ ಮುನ್ಸೂಚನೆ ಗಮನಿಸಿದಾಗ ಉತ್ತಮವಾಗಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ, ಅಂದುಕೊಂಡಷ್ಟು ಮಳೆಯಾಗಿಲ್ಲ. ಸೋಮವಾರದ ಮುನ್ಸೂಚನೆ ಗಮನಿಸಿ ಮುಂದೆ ಮಳೆಯಾಗುವುದೋ, ಇಲ್ಲವೋ ಎಂಬುದನ್ನು ಹೇಳಬಹುದು’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.