ADVERTISEMENT

‘ಸಿದ್ದು ನಿಜಕನಸು‘ ಪುಸ್ತಕ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ: ಕಾರ್ಯಕ್ರಮ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 10:30 IST
Last Updated 9 ಜನವರಿ 2023, 10:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಸಿದ್ದು ನಿಜಕನಸು ಕೃತಿ ಬಿಡುಗಡೆ ಸಮಾರಂಭ ಮುಂದೂಡಲಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.

ತಡೆಯಾಜ್ಞೆ ತೆರವಿಗೆ ಪುಸ್ತಕ ಬರೆದವರು ಪ್ರಯತ್ನಿಸಲಿದ್ದಾರೆ. ಬಿಜೆಪಿಗೂ ಪುಸ್ತಕ ಹೊರತರಲು ಮುಂದಾಗಿರುವ ಸಂಸ್ಥೆಗೂ ಸಂಬಂಧ ಇಲ್ಲ‌. ನನಗೂ ಕೃತಿ ಕುರಿತು ಕುತೂಹಲ ಇದೆ ಎಂದರು. ಸಿದ್ದರಾಮಯ್ಯಗೆ ಭಯ ಏಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಆಕ್ರೋಶ: ಇದಕ್ಕೂ ಮೊದಲು ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಪುರಭವನದ ಎದುರು ಪ್ರತಿಭಟನೆ ನಡೆಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.