ADVERTISEMENT

‘ಕೋವಿಡ್ ರಕ್ಷಾ’ ಸಹಾಯವಾಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 20:44 IST
Last Updated 31 ಜುಲೈ 2020, 20:44 IST

ಬೆಂಗಳೂರು: ‘ಕೋವಿಡ್ ರಕ್ಷಾ’ ಸಹಾಯವಾಣಿಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಕಂದಾಯ ಸಚಿವ ಆರ್.ಅಶೋಕ ಶುಕ್ರವಾರ ಚಾಲನೆ ನೀಡಿದರು.

10ಕ್ಕೂ ಹೆಚ್ಚು ನವೋದ್ಯಮಗಳ ಸಹಭಾಗಿತ್ವದಲ್ಲಿ ಬೆಂಗಳೂರು ದಕ್ಷಿಣ ಸಂಸದರ ಕಚೇರಿ ವತಿಯಿಂದ ಆರಂಭಿಸಿರುವ 08061914960 ಸಹಾಯವಾಣಿಗೆ ಕರೆ ಅಥವಾ ವಾಟ್ಸ್ ಆ್ಯಪ್ ಮಾಡುವ ಮೂಲಕ ಕೊರೊನಾ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಮಾಲೋಚನೆ ಮೂಲಕ ಪರಿಹಾರ ಪಡೆದುಕೊಳ್ಳಬಹುದು.

ಸಾರ್ವಜನಿಕರು ಸಂದೇಶ ಕಳುಹಿಸಿದ ಗಂಟೆಯೊಳಗೆ ವೈದ್ಯರು ರೋಗಿಗೆ ಕರೆ ಮಾಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.