ADVERTISEMENT

ಮನೆಗೆ ನುಗ್ಗಿ ದರೋಡೆ ಮಾಡಿದ್ದ 10 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 20:07 IST
Last Updated 24 ಮಾರ್ಚ್ 2021, 20:07 IST
ಬಂಧಿತರಿಂದ ಜಪ್ತಿ ಮಾಡಿರುವ ನಗದು, ಚಿನ್ನಾಭರಣ ಹಾಗೂ ಮಾರಕಾಸ್ತ್ರ
ಬಂಧಿತರಿಂದ ಜಪ್ತಿ ಮಾಡಿರುವ ನಗದು, ಚಿನ್ನಾಭರಣ ಹಾಗೂ ಮಾರಕಾಸ್ತ್ರ   

ಬೆಂಗಳೂರು: ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿ, ಮನೆಯವರನ್ನು ಹೆದರಿಸಿ ಚಿನ್ನಾಭರಣ, ನಗದು, ಮೊಬೈಲ್ ದರೋಡೆ ಮಾಡಿದ್ದ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಟ್ಟಮಡು ನಿವಾಸಿ ನಾಗೇಂದ್ರ (30), ವಿನೋಬಾನಗರದ ಪಾರ್ಥಿಬನ್ (25), ಮೈಸೂರು ರಸ್ತೆಯ ನಯಾಜ್ ಪಾಷಾ (35), ಕೆಂಗೇರಿ ಸೈಯದ್‌ ಸಿದ್ದಿಕ್ (30), ಶೇಷಾದ್ರಿಪುರದ ಸುರೇಶ (33), ದೇವರಜೀವನಹಳ್ಳಿಯ ನತೀಶ್ (30), ಶಿವಮೊಗ್ಗದ ಹನುಮೇಗೌಡ (28) ಹಾಗೂ ಧರ್ಮರಾಜ (28), ದೊಡ್ಡಮಾವಳ್ಳಿಯ ಇಮ್ರಾನ್ ಪಾಷಾ (32), ಚಿಕ್ಕಲ್ಲಸಂದ್ರದ ಹೇಮಂತ್ (22) ಬಂಧಿತ ಆರೋಪಿಗಳು.

ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಮಾ.6ರಂದು ನುಗ್ಗಿದ್ದ ಆರೋಪಿಗಳು ಮನೆಯವರನ್ನು ಚಾಕು ತೋರಿಸಿ ಹೆದರಿಸಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಮೊಬೈಲ್‌ಗಳನ್ನು ಕದ್ದು ಪರಾರಿಯಾಗಿದ್ದರು.

ADVERTISEMENT

ಬಂಧಿತರಿಂದ ₹5 ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು, ₹₹1.45 ಲಕ್ಷ ನಗದು, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಆಟೊ, ಎರಡು ಬೈಕ್ ಜಪ್ತಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.