ADVERTISEMENT

ಕಬ್ಬನ್‌: ಕುಸಿದು ಬಿದ್ದ ಆಶ್ರಯ ಮಂಟಪ

ಕಳಪೆ ಕಾಮಗಾರಿಯ ಆರೋಪ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 22:05 IST
Last Updated 15 ಜೂನ್ 2021, 22:05 IST
ಕುಸಿದು ಬಿದ್ದಿರುವ ಆಶ್ರಯ ಮಂಟಪ
ಕುಸಿದು ಬಿದ್ದಿರುವ ಆಶ್ರಯ ಮಂಟಪ   

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಆಶ್ರಯ ಪಡೆಯಲು ನಿರ್ಮಿಸಲಾಗಿದ್ದ ಕಿರು ಮಂಟಪ ಇತ್ತೀಚೆಗೆ ಕುಸಿದು ಬಿದ್ದಿದೆ. ಕಳಪೆ ಕಾಮಗಾರಿಯಿಂದ ಈ ಘಟನೆ ಸಂಭವಿಸಿದೆ ಎಂದು ಕಬ್ಬನ್‌ಪಾರ್ಕ್‌ ನಡಿಗೆದಾರರ ಸಂಘ ಆರೋಪಿಸಿದೆ.

ಉದ್ಯಾನಕ್ಕೆ ಬರುವವರು ಕುಳಿತುಕೊಳ್ಳಲು ಹಾಗೂ ಮಳೆಗಾಲದಲ್ಲಿ ಆಶ್ರಯ ಪಡೆಯಲು ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆ ವತಿಯಿಂದ2015ರಲ್ಲಿ ₹10 ಲಕ್ಷ ವೆಚ್ಚದಲ್ಲಿಈ ಮಂಟಪಗಳನ್ನು ನಿರ್ಮಿಸಲಾಗಿತ್ತು.

‘ಮಳೆ ಬಂದಾಗ ಆಶ್ರಯ ಪಡೆದುಕೊಳ್ಳಲು ಮಂಟಪ ನೆರವಾಗುತ್ತಿತ್ತು. ಇತ್ತೀಚೆಗೆ ಒಂದು ಮಂಟಪ ಕುಸಿದು ಬಿದ್ದಿದೆ. ಜನರಿಲ್ಲದ ವೇಳೆ ಕುಸಿದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ನಿರ್ಮಿಸಿರುವ ಮಂಟಪ ಕುಸಿಯುತ್ತದೆ ಎಂದರೆ ಕಳಪೆ ಕಾಮಗಾರಿ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ತನಿಖೆ ನಡೆಯಬೇಕು’ ಎಂದುಕಬ್ಬನ್‌ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷಎಸ್.ಉಮೇಶ್ ಆಗ್ರಹಿಸಿದರು.

ADVERTISEMENT

ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ಉದ್ಯಾನದ ತೋಟಗಾರಿಕೆ ಇಲಾಖೆಯ ಅಧಿಕಾರಿ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.