ದಾಬಸ್ಪೇಟೆ: ನರಸೀಪುರ ತೋಪಿನಲ್ಲಿರುವ ಆತ್ಮಾರಾಮ ಸ್ವಾಮಿ ಬ್ರಹ್ಮರಥೋತ್ಸವ ಭರತ ಹುಣ್ಣಿಮೆಯಾದ ಭಾನುವಾರ ಸಂಭ್ರಮದಿಂದ ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಸಂಪ್ರದಾಯದಂತೆ ಹಾಲೇನಹಳ್ಳಿ ಗ್ರಾಮಸ್ಥರು ರಥಕ್ಕೆ ಹಾಗೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥದ ಮೇಲೆ ದೇವರ ಮೂರ್ತಿ ಕೂರಿಸಿ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.
ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು. ರಥ ಎಳೆಯುತ್ತಿದ್ದಂತೆ ಸೂರು ಬಾಳೆಹಣ್ಣನ್ನು ಎಸೆದು ಸಂಭ್ರಮ ಪಟ್ಟರು. ನಂದಿಧ್ವಜ, ವೀರಗಾಸೆ, ತಮಟೆ ಕಲಾವಿದರು ಮಂಗಳವಾಧ್ಯಗಳೊಂದಿಗೆ ಪ್ರಾಕಾರೋತ್ಸವ ನಡೆಸಿದರು. ಹತ್ತಕ್ಕೂ ಹೆಚ್ಚು ಜೊತೆ ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು. ಸಂಜೆ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.