ADVERTISEMENT

ಬಿಸಿಯೂಟ ನಮ್ಮ ಸಂಸ್ಕಾರ ಅಲ್ಲ: ಉಮಾಕಾಂತ್‌ ಭಟ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 9:42 IST
Last Updated 31 ಡಿಸೆಂಬರ್ 2018, 9:42 IST

ಬೆಂಗಳೂರು: ಉಪವಾಸ ಇದ್ದವನಿಗೆ ಮಾತ್ರ ಹಸಿವು ಗೊತ್ತಾಗುತ್ತದೆ. ಹಸಿವು ಗೊತ್ತಾದವನಿಗೆ ಮಾತ್ರ ಊಟದ ರುಚಿ ಗೊತ್ತಾಗುತ್ತದೆ. ಆದ್ದರಿಂದ ಹಸಿವು ಸಂಸ್ಕಾರಯುತವಾದ ವಿಷಯ. ಇವತ್ತು ಸರ್ಕಾರ ಬಹಳ ದೊಡ್ಡ ಮನಸ್ಸು ಮಾಡಿ, ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸಾಯಂಕಾಲ ತಂಗಳದ ಊಟ, ಶಾಲೆಯ ಅವಧಿಯಲ್ಲಿ ಎಲ್ಲರಿಗೂ ನಿದ್ರೆ, ಇಂಥ ವ್ಯವಸ್ಥೆಗಳನ್ನೆಲ್ಲ ಮಾಡುತ್ತಿದೆ. ಆದರೆ, ಭಾರತ ದೇಶದ ಸಂಶೋಧನೆ ಇದಲ್ಲ ಎಂದುವಿದ್ವಾನ್‌ ಉಮಾಕಾಂತ್‌ ಭಟ್‌ ಸರ್ಕಾರ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದರು.

ಉಪವಾಸ ಮತ್ತು ಜಾಗರಣೆ ಭಾರತೀಯರ ಪ್ರಯೋಗವಾಗಿದೆ. ಉಪವಾಸವನ್ನು ನಮಗೆ ಸಂಸ್ಕಾರವಾಗಿ ಕೊಟ್ಟಿದ್ದು ಯಾಕೆಂದರೆ, ಹಸಿವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಅದನ್ನು ನಮ್ಮ ವಶದಲ್ಲಿ ಇಟ್ಟುಕೊಳ್ಳಲು. ಹಾಗಾದಾಗ ಮಾತ್ರ ನಮಗೆ ಭೋಜನದ ರುಚಿ ‌ಅರ್ಥವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT