ಬೆಂಗಳೂರು: ಹೆಬ್ಬಾಳ ಕುಂತಿಗ್ರಾಮ ಎ ಬ್ಲಾಕ್ ಮತ್ತು ಬಿ ಬ್ಲಾಕ್ನ ಘೋಷಿತ ಕೊಳೆಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಕ್ಕುಪತ್ರಗಳನ್ನುಶಾಸಕ ಬೈರತಿ ಸುರೇಶ್ ಶುಕ್ರವಾರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ‘ಕ್ಷೇತ್ರದಾದ್ಯಂತ 2 ಸಾವಿರ ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಹಕ್ಕು ಪತ್ರ ವಿತರಿಸಲು ವೈಯಕ್ತಿಕವಾಗಿ ₹60 ಲಕ್ಷ ನೀಡಿದ್ದೇನೆ’ ಎಂದು ಹೇಳಿದರು.
ಹೆಬ್ಬಾಳ ವಾರ್ಡ್ನ ಗುಂಡಪ್ಪ ರೆಡ್ಡಿ ಲೇಔಟ್ನಲ್ಲಿ ಕೊಳವೆಬಾವಿ ಕೊರೆಯುವ ಅಭಿವೃದ್ಧಿ ಕಾಮಗಾರಿಗೂ ಇದೇ ವೇಳೆ ಚಾಲನೆ ನೀಡಿದರು.
ಬಿಬಿಎಂಪಿ ಮಾಜಿ ಸದಸ್ಯರಾದ ಅಬ್ದುಲ್ ವಾಜೀದ್, ಆನಂದ್ ಕುಮಾರ್, ಹೆಬ್ಬಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಾಜಿ, ಪಕ್ಷದ ಮುಖಂಡರು, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.