ಬೆಂಗಳೂರು: ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಸರ್ವಾನುಮತದಿಂದ5ನೇ ಬಾರಿ ಡಾ.ಗಿರಿಧರ ಕಜೆ ಆಯ್ಕೆಯಾಗಿದ್ದಾರೆ.
ಮಹಾಸಭೆ 76ನೇ ವರ್ಷದ ಸರ್ವಸದಸ್ಯರ ಸಭೆ ನಗರದ ಹವ್ಯಕ ಭವನದಲ್ಲಿ ಭಾನುವಾರ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ,ಕೊಡಗು, ಕಾಸರಗೋಡು ವ್ಯಾಪ್ತಿಯ15 ನಿರ್ದೇಶಕ ಸ್ಥಾನ
ಗಳಿಗೆ ನಿಗದಿಯಾಗಿದ್ದಚುನಾವಣೆಯಲ್ಲಿ ಅವಿರೋಧವಾಗಿಆಯ್ಕೆ ಮಾಡಲಾಯಿತು. ಚುನಾವಣಾಧಿ
ಕಾರಿ ರಾಮಭಟ್ ನೂತನ ನಿರ್ದೇಶಕರ ಹೆಸರು ಘೋಷಿಸಿದರು.
ಮುಂದಿನ ಸಾಲಿಗೆ ಉಪಾಧ್ಯಕ್ಷರಾಗಿಶ್ರೀಧರ ಜೆ.ಭಟ್ ಕೆಕ್ಕಾರು, ಆರ್.ಎಂ.ಹೆಗಡೆ ಬಾಳೇಸರ ನೇಮಕರಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ವೇಣುವಿಘ್ನೇಶ ಸಂಪ,ಕಾರ್ಯದರ್ಶಿಗಳಾಗಿ ಪ್ರಶಾಂತಕುಮಾರ ಭಟ್ ಯಲ್ಲಾಪುರ, ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಆಯ್ಕೆಯಾದರು.
ಗಾಯತ್ರಿ ಮಹೋತ್ಸವ: ‘ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿರುವುದು ಸಮಾಜದಲ್ಲಿನ ಸಂಘಟನೆಯ ಶಕ್ತಿ ಹಾಗೂ ಒಗ್ಗಟ್ಟು ತೋರಿಸುತ್ತದೆ. ಸಮಾಜವನ್ನು ಒಡೆಯುವ ಪ್ರಯತ್ನಗಳ ಶಕ್ತಿ
ಕುಂದುವ ಜತೆಗೆ ಹೀನ ಮನಸ್ಕರ ಧ್ವನಿ ಅಡಗಿದೆ’ ಎಂದು ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ ಅವರು ಹರ್ಷ ವ್ಯಕ್ತಪಡಿಸಿದರು.
‘ಹವ್ಯಕ ಮಹಾಸಭೆಯಿಂದ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸುವ ಸಲುವಾಗಿ ಈ ವರ್ಷ
‘ಗಾಯತ್ರಿ ಮಹೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.