ADVERTISEMENT

ತುಂಬಿದ ತೊಟ್ಟಿ, ಇಂಗಿದ ಬಾಯಾರಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 20:16 IST
Last Updated 2 ಜನವರಿ 2019, 20:16 IST
ದುರಸ್ತಿಗೊಂಡ ಘಟಕದಲ್ಲಿ ಪ್ರಯಾಣಿಕರು ನೀರು ಕುಡಿಯುತ್ತಿರುವುದು
ದುರಸ್ತಿಗೊಂಡ ಘಟಕದಲ್ಲಿ ಪ್ರಯಾಣಿಕರು ನೀರು ಕುಡಿಯುತ್ತಿರುವುದು   

ಬೆಂಗಳೂರು: ನಗರದ ಹೃದಯ ಭಾಗ ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆಬಿಎಂಟಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.

ನಿಲ್ದಾಣದಲ್ಲಿ ಕೆಲ ದಿನಗಳಿಂದ ನೀರಿನ ತೊಟ್ಟಿಗಳು ಸ್ಥಗಿತಗೊಂಡು ದೂಳು ಹಿಡಿದು ಮೂಲೆ ಸೇರಿದ್ದವು. ಸದ್ಯ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ ನಲ್ಲಿಗಳನ್ನು ಅಳವಡಿಸಿದೆ. ಲೋಟಗಳನ್ನು ಸಹ ಇಟ್ಟಿದೆ.

ಪ್ರಯಾಣಿಕರು ಇಲ್ಲಿಯೇ ನೀರು ಕುಡಿಯುತ್ತಿದ್ದಾರೆ. ಬಸ್‌ ಚಾಲಕರು ಮತ್ತು ನಿರ್ವಾಹಕರು ನೀರನ್ನುಬಾಟಲಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ.

ADVERTISEMENT

ಈ ಕುರಿತು ಪ್ರಜಾವಾಣಿ ಮಂಗಳವಾರ ‘ನೀರು ಆರಿದ ತೊಟ್ಟಿ, ಬಾಯಾರಿದ ಪ್ರಯಾಣಿಕರು’ ಎನ್ನುವ ಶೀರ್ಷಿಕೆಯಡಿವಿಶೇಷ ವರದಿಯನ್ನು ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.