ADVERTISEMENT

ದ್ವಾರಕಾ ಹೋಟೆಲ್ ಮಾಲೀಕ ಶ್ರೀಧರ್ ಹೊಳ್ಳ ನಿಧನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 20:31 IST
Last Updated 8 ಜೂನ್ 2022, 20:31 IST
ಶ್ರೀಧರ್ ಹೊಳ್ಳ
ಶ್ರೀಧರ್ ಹೊಳ್ಳ   

ಬೆಂಗಳೂರು: ಎನ್.ಆರ್.ಕಾಲೊನಿಯ ದ್ವಾರಕಾ ಹೋಟೆಲ್ ಮಾಲೀಕ ಶ್ರೀಧರ್ ಹೊಳ್ಳ(88) ವಯೋ ಸಹಜ ಕಾಯಿಲೆಯಿಂದ ಬುಧವಾರ ನಿಧನರಾದರು. ಇವರಿಗೆ ಪತ್ನಿ ಸುಶೀಲಾ ಮತ್ತು ಐವರು ಹೆಣ್ಣುಮಕ್ಕಳಿದ್ದಾರೆ.

ಉಡುಪಿ ಮೂಲದವರಾದ ಶ್ರೀಧರ್ ಹೊಳ್ಳ 1972ರಲ್ಲಿ ಬಸವನಗುಡಿ ಟೆಂಪಲ್ ರಸ್ತೆಯಲ್ಲಿ ದ್ವಾರಕಾವನ್ನು ಒಂದು ಸಣ್ಣ ಉಪಾಹಾರ ಗೃಹವನ್ನಾಗಿ ಪ್ರಾರಂಭಿಸಿದ್ದರು. 2005ರಲ್ಲಿ ದ್ವಾರಕಾವನ್ನು ಎನ್.ಆರ್.ಕಾಲೊನಿಗೆ ವರ್ಗಾಯಿಸಲಾಗಿತ್ತು. ಇಲ್ಲಿ ಸಿಗುವ ಖಾಲಿ ದೋಸೆ, ಕ್ಯಾರೆಟ್‌ ಹಲ್ವಾ ಮತ್ತು ಪುರಿ ಸವಿಯಲು ಸಾಕಷ್ಟು ಗ್ರಾಹಕರಿದ್ದಾರೆ. ಹೋಟೆಲ್‌ ಇದೇ ವರ್ಷ 50 ವಸಂತಗಳನ್ನು ಪೂರೈಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT