ADVERTISEMENT

ಬೆಂಗಳೂರು ಉತ್ತರ ತಾಲ್ಲೂಕು: ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 15:45 IST
Last Updated 8 ಡಿಸೆಂಬರ್ 2023, 15:45 IST
ವಿದ್ಯುತ್‌ ವ್ಯತ್ಯಯ
ವಿದ್ಯುತ್‌ ವ್ಯತ್ಯಯ   

ನೆಲಮಂಗಲ: 66/11 ಕೆ.ವಿ. ಆಲೂರು ವಿದ್ಯುತ್‌ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ ಆಲೂರು, ಆಲೂರು ಪಾಳ್ಯ, ಮಾಕಳಿ, ದಾಸನಪುರ, ಮಾದನಾಯಕಹನಹಳ್ಳಿ ಹಾಗೂ  ಸುತ್ತಮುತ್ತಲಿನ ಪ್ರದೇಶಗಳು, ಮಂತ್ರಿ ಬಡಾವಣೆ, ನರಸೀಪುರ, ಮತ್ತಹಳ್ಳಿ, ಹೊನ್ನಸಂದ್ರ, ಹೊನ್ನಸಂದ್ರ ಕಾಲೊನಿ, ಬಿಡಿಎ ಪ್ಲಾಟ್ಸ್‌, ನಗರೂರು, ನಗರೂರು ಕಾಲೊನಿ, ಎಪಿಎಂಸಿ, ಟಾಟಾ ಹೌಸಿಂಗ್‌, ಕೋಡಿಪಾಳ್ಯ, ಹೆಗ್ಗಡದೇವನಪುರ, ಅಡಕಮಾರನಹಳ್ಳಿ, ಅರೆಕ್ಯಾತನಹಳ್ಳಿ, ನಾರಾಯಣಪ್ಪನಪಾಳ್ಯ, ಗೌಡಹಳ್ಳಿ, ಗೌಡಹಳ್ಳಿ ಕಾಲೊನಿ, ಸಾಯಿ ಬಡಾವಣೆ, ಇ.ಕೆ.ಬಡಾವಣೆ, ಮಾತೃಶ್ರೀ ಬಡಾವಣೆ, ಸಂಜೀವಿನ ಬಡಾವಣೆ, ಹಿಮಾಲಯ ಡ್ರಗ್ಸ್‌ ಕಂಪನಿ, ಲಕ್ಷ್ಮೀಪುರ, ಲಕ್ಷ್ಮೀಪುರ ಕಾಲೊನಿ, ಸಿದ್ದನಹೊಸಹಳ್ಳಿ, ದೊಂಬರಹಳ್ಳಿ, ರಾಜೇಶ್ವರಿನಗರ, ಕದರನಹಳ್ಳಿ, ಕದರನಹಳ್ಳಿ ಕಾಲೊನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT