ಬೆಂಗಳೂರು: ಶಿವಾಜಿನಗರದ ರಸೆಲ್ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ.
ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಕಾರ್ಯ ಆರಂಭಗೊಂಡಿದೆ.
ಕಾರ್ಯಾಚರಣೆ ಆರಂಭವಾಗುವಮುನ್ಸೂಚನೆ ಇದ್ದ ಕಾರಣ ರಸ್ತೆ ಬದಿಯ ಅಂಗಡಿ, ಹೋಟೆಲ್ ಮಾಲೀಕರು ಬೆಳಿಗ್ಗೆಯೇ ಸ್ವಯಂ ಪ್ರೇರಿತವಾಗಿ ತೆರವು ಮಾಡಿಕೊಂಡರು.
ಉಳಿದಿರುವ ಒತ್ತುವರಿತೆರವು ಕಾರ್ಯವನ್ನು ಪೊಲೀಸ್ ಭದ್ರತೆ ನಡುವೆ ಅಧಿಕಾರಿಗಳು ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.