ADVERTISEMENT

10 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 20:56 IST
Last Updated 21 ಮೇ 2020, 20:56 IST
ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಮುಖಂಡ ಮುನಿರತ್ನ ಅವರು ಬಡವರಿಗೆ ನೀಡಿದ ಆಹಾರ ಕಿಟ್‍ಗಳನ್ನು ಚಿತ್ರನಟ ಸಾಧುಕೋಕಿಲ ಹಾಗೂ ನಟಿ ಅಮೂಲ್ಯ ವಿತರಿಸಿದರು
ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಮುಖಂಡ ಮುನಿರತ್ನ ಅವರು ಬಡವರಿಗೆ ನೀಡಿದ ಆಹಾರ ಕಿಟ್‍ಗಳನ್ನು ಚಿತ್ರನಟ ಸಾಧುಕೋಕಿಲ ಹಾಗೂ ನಟಿ ಅಮೂಲ್ಯ ವಿತರಿಸಿದರು   

ರಾಜರಾಜೇಶ್ವರಿನಗರ: ‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರ ಪೈಕಿ ಈವರೆಗೆ 50 ಸಾವಿರ ಜನರಿಗೆ ಮೂರು ಹೊತ್ತು ಊಟ, ಸಾವಿರಾರು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಕೀರ್ತಿ ಬಿಜೆಪಿ ಮುಖಂಡ ಮುನಿರತ್ನ ಅವರಿಗೆ ಸಲ್ಲುತ್ತದೆ’ ಎಂದು ಚಿತ್ರನಟ ಸಾಧುಕೋಕಿಲ ಹೇಳಿದರು.

ಮುನಿರತ್ನ ಅವರು ರಾಜರಾಜೇಶ್ವರಿನಗರ ವಾರ್ಡ್‌ನ ಹತ್ತುಸಾವಿರ ಕುಟುಂಬಗಳಿಗೆ ನೀಡಿದ ದಿನಸಿ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ಚಿತ್ರನಟಿ ಅಮೂಲ್ಯ, ‘ಲಾಕ್‍ಡೌನ್‌ನಿಂದ ಯಾರೂ ಸಂಕಷ್ಟಕ್ಕೆ ಒಳಗಾಗಬಾರದು. ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿ ಇರಬೇಕು ಎಂಬ ಉದ್ದೇಶದಿಂದ ಕ್ಷೇತ್ರದ ಜನರಿಗೆ ಆಹಾರ, ದಿನಸಿ ಕಿಟ್‌ ವಿತರಿಸುವ ಮೂಲಕ ಮುನಿರತ್ನ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಪಾಲಿಕೆ ಸದಸ್ಯರಾದ ನಳಿನಿ ಮಂಜು, ಜಿ.ಮೋಹನ್‍ಕುಮಾರ್,ಮುಖಂಡರಾದ ವಿ.ಸಿ.ಚಂದ್ರು,ಎಂ.ಮಂಜುನಾಥ್, ರವಿಗೌಡ,
ಕಾಳೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.