ADVERTISEMENT

15 ಕೆ.ಜಿ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 20:15 IST
Last Updated 16 ಸೆಪ್ಟೆಂಬರ್ 2020, 20:15 IST

ಬೆಂಗಳೂರು: ಓಕಳಿಪುರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 15 ಕೆ.ಜಿ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಶ್ರೀರಾಮಪುರ ನಿವಾಸಿ ಸತ್ಯ (23) ಬಂಧಿತ ಆರೋಪಿ. ಓಕಳಿಪುರ ಮಾರ್ಗದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.

'ವಿಶಾಖಪಟ್ಟಣದಿಂದ ವ್ಯಕ್ತಿಯೊಬ್ಬ ಗಾಂಜಾ ತಂದುಕೊಡುತ್ತಿದ್ದ. ಮಾರಾಟದ ಹಣದಲ್ಲಿ ಪಾಲು ನೀಡುವುದಾಗಿಹೇಳಿದ್ದ' ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

ADVERTISEMENT

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ: ಪೀಣ್ಯ ಠಾಣೆ ವ್ಯಾಪ್ತಿಯ ಬಸವೇಶ್ವರ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 2.3 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಎಂ.ಎಸ್.ಪಾಳ್ಯದ ಸಂತೋಷ್ (22), ನೆಲಗದರನಹಳ್ಳಿಯ ಮಂಜುನಾಥ್ (24) ಬಂಧಿತರು.

'ಕೊರೊನಾದಿಂದ ಕೆಲಸ ಇಲ್ಲದ ಕಾರಣ ಮಾಲೂರಿನ ಮೃತ್ಯುಂಜಯ ಎಂಬಾತನಿಂದ ಗಾಂಜಾ ಪಡೆದು ಮಾರುತ್ತಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.