ADVERTISEMENT

₹3.50 ಲಕ್ಷ ಮೌಲ್ಯದ ಚಿನ್ನ ವಶ:ಬಂಧನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 20:29 IST
Last Updated 13 ಜನವರಿ 2021, 20:29 IST
ಪೊಲೀಸರು ಜಪ್ತಿ ಮಾಡಿರುವ ಚಿನ್ನಾಭರಣ.
ಪೊಲೀಸರು ಜಪ್ತಿ ಮಾಡಿರುವ ಚಿನ್ನಾಭರಣ.   

ಬೆಂಗಳೂರು: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಟಿ.ಗೋವಿಂದ ಬಂಧಿತ ಆರೋಪಿ. ಈತನಿಂದ ₹3.50 ಲಕ್ಷ ಬೆಲೆಬಾಳುವ 74 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜ.7ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದ ಮಹಿಳೆಯೊಬ್ಬರನ್ನು ನೋಡಲು ಜೀವ ಎಂಬುವರು ಬಂದಿದ್ದು, ಇವರೊಂದಿಗೆಆರೋಪಿ ಗೋವಿಂದ ಕೂಡ ಇದ್ದ.

ADVERTISEMENT

ಜೀವ ಮತ್ತು ಮಹಿಳೆ ತಿಂಡಿ ತಿನ್ನಲು ಹೊರಗೆ ಹೋಗಿದ್ದ ಸಮಯದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೊಲೀಸರು ಆರೋಪಿಯನ್ನು ಸೋಮವಾರ ಪತ್ತೆ ಹಚ್ಚಿದ್ದು, ದಸ್ತಗಿರಿ ಮಾಡಿ ಆತ ಕದ್ದಿದ್ದ ಚಿನ್ನದ ಓಲೆ ಮತ್ತು ಸರಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 380ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.