ಬೆಂಗಳೂರು: ಹಾಪ್ಕಾಮ್ಸ್ ವತಿಯಿಂದ ಮಾರ್ಚ್ 3ರಿಂದ ಏಪ್ರಿಲ್ವರೆಗೆ ರಿಯಾಯಿತಿ ದರದಲ್ಲಿ ‘ದ್ರಾಕ್ಷಿ ಮತ್ತು ಕಲ್ಲಂಗಡಿ ಮಾರಾಟ ಮೇಳ’ ಆಯೋಜಿಸಲಾಗಿದೆಎಂದುಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ತಿಳಿಸಿದರು.
‘ವಿಜಯಪುರ, ಬಾಗಲಕೋಟೆ, ಗದಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳೆದ8ಕ್ಕೂ ಹೆಚ್ಚು ತಳಿಯ ದ್ರಾಕ್ಷಿ ಹಾಗೂ ಕಿರಣ, ನಾಮಧಾರಿ ತಳಿಯ ಕಲ್ಲಂಗಡಿ ಮೇಳದಲ್ಲಿ ಇರಲಿದೆ. ಈ ಬಾರಿ ಶೇ 5ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ.ಮೇಳದ ಮೊದಲ ವಾರದಲ್ಲಿ 50 ಟನ್ ದ್ರಾಕ್ಷಿ ಮತ್ತು 25 ಟನ್ ಕಲ್ಲಂಗಡಿ ಮಾರಾಟ ಆಗುವ ನಿರೀಕ್ಷೆ ಇದೆ’ ಎಂದರು.
ಹಾಪ್ಕಾಮ್ಸ್ ಅಧ್ಯಕ್ಷ ಎನ್.ದೇವರಾಜ್, ‘ಲಾಲ್ಬಾಗ್ ಬಳಿ ಇರುವ ಹಾಪ್ಕಾಮ್ಸ್ ಕೇಂದ್ರ ಕಚೇರಿಯಲ್ಲಿ ಮಾರ್ಚ್ 3ರಂದು ಬೆಳಿಗ್ಗೆ 11 ಗಂಟೆಗೆ ತೋಟಗಾರಿಕೆ ಸಚಿವ ಮುನಿರತ್ನ ಮೇಳ ಉದ್ಘಾಟಿಸುವರು. ಸಂಸ್ಥೆಯ ಮಳಿಗೆಗಳಲ್ಲೂ ಮಾರಾಟ ಇರಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.