ADVERTISEMENT

ಸಿ.ಎಂ ಕುಮಾರಸ್ವಾಮಿ ಹೇಳಿದ ಕೆಲವೇ ಗಂಟೆಗಳಲ್ಲಿ ಕೈಕೊಟ್ಟ ಕರೆಂಟ್‌!

ಲೋಡ್‌ ಶೆಡ್ಡಿಂಗ್ ಬೇಡ ಎಂದಿದ್ದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 19:57 IST
Last Updated 25 ಅಕ್ಟೋಬರ್ 2018, 19:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯ ಬಗ್ಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಪತ್ರಕರ್ತರಿಗೆ ಮಾಹಿತಿ ನೀಡುವ ವೇಳೆಯೇ ವಿದ್ಯುತ್‌ ಕೈಕೊಟ್ಟಿತು.

ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಸಂಜೆ ಪುನರುಚ್ಚರಿಸಿದ್ದರು. ಜತೆಗೆ, ಮಾಧ್ಯಮದವರ ಮೇಲೆ ಕಿಡಿ ಕಾರಿದ್ದರು.

ಬಳಿಕ ಸಚಿವ ಸಂಪುಟದ ಸಭೆ ನಡೆದಿತ್ತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾತ್ರಿ 8ಕ್ಕೆ ಬಂಡೆಪ್ಪ ಮಾಹಿತಿ ನೀಡುತ್ತಿದ್ದರು. ಈ ವೇಳೆ ಕರೆಂಟ್‌ ಹೋಯಿತು. ಬಳಿಕ ಬಂತು. ಕರೆಂಟ್‌ ಹೋಗಿದ್ದರಿಂದ ಸಚಿವರು ಮುಜುಗರಕ್ಕೆ ಒಳಗಾದರು. ‘ವಿದ್ಯುತ್‌ ವ್ಯತ್ಯಯ ಇಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರಲ್ಲ. ಈಗ ಹೋಗಿದ್ದು ಹೇಗೆ’ ಎಂದು ಪತ್ರಕರ್ತರು ಕಾಲೆಳೆದರು. ಕೆಲವೊಮ್ಮೆ ಹೀಗಾಗುತ್ತೆ ಬಿಡಿ ಎಂದು ಬಂಡೆಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.