ADVERTISEMENT

ಹಿಂದೂ ರಾಷ್ಟ ಅಧಿವೇಶನ 27ರಿಂದ

​ಪ್ರಜಾವಾಣಿ ವಾರ್ತೆ
Published 21 ಮೇ 2019, 1:13 IST
Last Updated 21 ಮೇ 2019, 1:13 IST
   

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯ8ನೇ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ ಗೋವಾದ ಘೋಂಡಾ ರಾಮನಾಥ ದೇವಸ್ಥಾನದಲ್ಲಿಇದೇ 27 ರಿಂದ ಜೂನ್‌ 8 ರವರೆಗೆ ನಡೆಯಲಿದೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಕ್ತಾರ ಮೋಹನಗೌಡ, ‘ಧರ್ಮಪ್ರೇಮಿ ವಕೀಲರ,ಉದ್ಯಮಿಗಳ, ಸೋಶಿಯಲ್‌ ಮೀಡಿಯಾ ಕಾನ್‌ಕ್ಲೇವ್‌ ಅಧಿವೇಶನಗಳು ನಡೆಯಲಿವೆ. ಹಿಂದೂ ರಾಷ್ಟ್ರ, ಧರ್ಮಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ’ ಎಂದು ಹೇಳಿದರು.

‘ಬಾಂಗ್ಲಾದೇಶ ಮೈನಾರಿಟಿ ವಾಚ್‌’ನ ಅಧ್ಯಕ್ಷ ರವೀಂದ್ರ ಘೋಷ್‌, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಜೆ.ಸಾಯಿದೀಪಕ್‌ ಹಾಗೂ ಹಲವರು ಭಾಗವಹಿಸಲಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.