ADVERTISEMENT

ಪೌರಕಾರ್ಮಿಕರಿಗೆ ರೋಗ ನಿರೋಧಕತೆ ಹೆಚ್ಚಿಸುವ ಪಾನೀಯ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 6:06 IST
Last Updated 16 ಆಗಸ್ಟ್ 2020, 6:06 IST
ಎಚ್‍ಆರ್ ಡಬ್ಲ್ಯುಎ ಹಾಗೂ ಎ ಆಂಡ್ ಎ ಫೌಂಡೇಷನ್ ವತಿಯಿಂದ ಪೌರಕಾರ್ಮಿಕರಿಗೆ ಇಮ್ಯುನಿಟ್ ಬೂಸ್ಟರ್ ಪಾನೀಯ ವಿತರಿಸಲಾಯಿತು.
ಎಚ್‍ಆರ್ ಡಬ್ಲ್ಯುಎ ಹಾಗೂ ಎ ಆಂಡ್ ಎ ಫೌಂಡೇಷನ್ ವತಿಯಿಂದ ಪೌರಕಾರ್ಮಿಕರಿಗೆ ಇಮ್ಯುನಿಟ್ ಬೂಸ್ಟರ್ ಪಾನೀಯ ವಿತರಿಸಲಾಯಿತು.   

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಲಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಎಚ್‍ಆರ್‌ಡಬ್ಲ್ಯುಎ) ಹಾಗೂ ಎ ಆಂಡ್ ಎ ಫೌಂಡೇಷನ್ ಸಹಯೋಗದಲ್ಲಿ ಪೌರಕರ್ಮಿಕರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ 'ಎನ್‍ಲೈಟ್‍ಲೈಫ್ ಇಮ್ಯುನಿಟಿ ಬೂಸ್ಟರ್ ಕಿಟ್' ವಿತರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಎಚ್‍ಆರ್‌ಡಬ್ಲ್ಯುಎ ಅಧ್ಯಕ್ಷ ಮಹೇಂದ್ರ ಜೈನ್, 'ಪೌರಕಾರ್ಮಿಕರಿಗೆ ಒಂದು ವರ್ಷ ಉಚಿತ ವೈದ್ಯಕೀಯ ಸಮಾಲೋಚನೆ, ರಕ್ತ ಪರೀಕ್ಷೆಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಇಮ್ಯುನಿಟಿ ಬೂಸ್ಟರ್ ವಿತರಿಸಲಾಗುವುದು. ಕೊರೊನಾದಂತಹ ಸೋಂಕಿನಿಂದ ರಕ್ಷಣೆ ಪಡೆಯಲು ಇದು ನೆರವಾಗಲಿದೆ' ಎಂದರು.

ಎನ್‍ಲೈಟ್‍ಲೈಫ್ ಸಂಸ್ಥೆಯ ಆಹಾರ ವಿಜ್ಞಾನಿ ಡಾ.ಗೋವರ್ಧನ್,'ಪೌರಕಾರ್ಮಿಕರು ಸೋಂಕಿನಿಂದ ಪಾರಾಗಲು ಕಸ ವಿಲೇ ಮಾಡುವಾಗ ಪಾದರಕ್ಷೆ ಅಥವಾ ಬೂಟ್‍ಗಳನ್ನು ಧರಿಸುವುದು ಅಗತ್ಯ. ಬಟ್ಟೆಗಳನ್ನು ಚೆನ್ನಾಗಿ ತೊಳೆಯಿರಿ. ಪ್ರತಿದಿನ 3 ಲೀ ನೀರು ಕುಡಿಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಎಚ್‍ಆರ್ ಡಬ್ಲ್ಯುಎ ಉಪಾಧ್ಯಕ್ಷ ಮೋಹನ್‍ಕುಮಾರ್, ಪಾಲಿಕೆ ಸದಸ್ಯೆ ಮಮತಾ ಸರವಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.