ಬೆಂಗಳೂರು: ಕೇಂದ್ರೀಯ ಉಗ್ರಾಣ ನಿಗಮವು (ಸಿಡಬ್ಲ್ಯುಸಿ) ವಾಣಿಜ್ಯ ಮತ್ತು ಕೈಗಾರಿಕೆ ಉತ್ಪನ್ನಗಳ ಸಂಗ್ರಹ ಸಂಬಂಧ ದೇವನಹಳ್ಳಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಐಟಿ ಪಾರ್ಕ್ನಲ್ಲಿ ನಿರ್ಮಿಸುತ್ತಿರುವ ಉಗ್ರಾಣದ ಶಿಲಾನ್ಯಾಸ ಬುಧವಾರ ನೇರವೇರಿತು.
ಶಿಲಾನ್ಯಾಸ ನೆರವೇರಿಸಿದ ನಿಗಮದ ಅಧ್ಯಕ್ಷ ಡಿ.ವಿ.ಪ್ರಸಾದ್, ‘14.20 ಎಕರೆಯಲ್ಲಿ ಉಗ್ರಾಣ ತಲೆಯೆತ್ತಲಿದೆ. ಮೊದಲ ಹಂತದಲ್ಲಿ 4.5 ಲಕ್ಷ ಚದರ ಅಡಿ ವಿಸ್ತೀರ್ಣ ಹಾಗೂ ಎರಡನೇ ಹಂತದಲ್ಲಿ 8 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಉಗ್ರಾಣವನ್ನು ನಿರ್ಮಾಣ ಮಾಡಲಾಗುತ್ತದೆ. ಇದು 20 ಮಹಡಿಗಳ ಕಟ್ಟಡವಾಗಿದ್ದು, 40 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಡೇಟಾ ವೇರ್ ಹೌಸಿಂಗ್ ಇರಲಿದೆ. ಇದಲ್ಲದೇ ಲಾಜಿಸ್ಟಿಕ್ ಮತ್ತು ವಾಣಿಜ್ಯ ಕಚೇರಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಈ ಉಗ್ರಾಣ ಆರಂಭಿಸುವ ವೇಳೆಗೆ ಸುಮಾರು 1 ಸಾವಿರ ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.