ADVERTISEMENT

ಅಂಬೇಡ್ಕರ್‌ ಆದರ್ಶ ಸೇನೆಯಿಂದ ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 11:18 IST
Last Updated 1 ನವೆಂಬರ್ 2022, 11:18 IST
ಅಂಬೇಡ್ಕರ್‌ ಆದರ್ಶ ಸೇನೆಯ ಪದಾಧಿಕಾರಿಗಳು
ಅಂಬೇಡ್ಕರ್‌ ಆದರ್ಶ ಸೇನೆಯ ಪದಾಧಿಕಾರಿಗಳು   

ಬೆಂಗಳೂರು:ಕನ್ನಡನಾಡು ವಿವಿಧ ಮತ, ಪಂಥ, ಧರ್ಮಗಳ ಸಂಗಮವಾಗಿದೆ. ಭವ್ಯ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂದು ಅಂಬೇಡ್ಕರ್‌ ಆದರ್ಶ ಸೇನೆಯ ಅಧ್ಯಕ್ಷ ಚಂದ್ರಶೇಖರ್‌ ಹೇಳಿದರು.

ಇಲ್ಲಿನ ಬಸವೇಶ್ವರ ನಗರದಲ್ಲಿಅಂಬೇಡ್ಕರ್‌ ಆದರ್ಶ ಸೇನೆಯ ಕಚೇರಿಯಲ್ಲಿಧ್ಚಜಾರೋಹಣ ನೆರವೇರಿಸಲಾಯಿತು.

ಈ ನಾಡಿನಲ್ಲಿ ಸಾಹಿತಿಗಳು, ಕವಿಗಳು, ಶಿಲ್ಪಿಗಳು, ಕಲಾವಿದರು, ಸಂಶೋಧಕರು, ಕ್ರೀಡಾಪಟುಗಳು ಹಾಗೂ ಇತಿಹಾಸಕಾರರು ತಮ್ಮದೇ ಶೈಲಿಯಲ್ಲಿ ಸಾಧನೆ ಮಾಡಿದ್ದಾರೆ. ಇದೇ ಮಾದರಿಯಲ್ಲಿ ನಾವು ಕೂಡ ಸಾಧನೆ ಮಾಡಬೇಕು ಎಂದುಅಂಬೇಡ್ಕರ್‌ ಆದರ್ಶ ಸೇನೆಯ ಉಪಾಧ್ಯಕ್ಷ ಗೌರಿಶಂಕರ್‌ ಹೇಳಿದರು.

ADVERTISEMENT

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಸವರಾಜ್‌, ವೆಂಕಟೇಶ್‌ ಸೇರಿದಂತೆಅಂಬೇಡ್ಕರ್‌ ಆದರ್ಶ ಸೇನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.