ADVERTISEMENT

ಕವಿ ಲಕ್ಷ್ಮಣರಾವ್ ಅವರಿಗೆ ‘ಕನ್ನಡ ಸಾಹಿತ್ಯ ಪ್ರಣತಿ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 20:23 IST
Last Updated 10 ಜನವರಿ 2023, 20:23 IST
ಬಿ.ಆರ್. ಲಕ್ಷ್ಮಣ್ ರಾವ್
ಬಿ.ಆರ್. ಲಕ್ಷ್ಮಣ್ ರಾವ್   

ಬೆಂಗಳೂರು: ಕವಿ ಬಿ.ಆರ್.ಲಕ್ಷ್ಮಣರಾವ್ ಅವರನ್ನು ‘ಕನ್ನಡ ಸಾಹಿತ್ಯ ಪ್ರಣತಿ’ ಪ್ರಶಸ್ತಿ ಹಾಗೂ ಗಾಯಕ ಗರ್ತಿಕೆರೆ ರಾಘಣ್ಣ (ಹೋ.ನಾ.ರಾಘವೇಂದ್ರ ಗರ್ತಿಕೆರೆ) ಅವರನ್ನು ‘ಕನ್ನಡ ಸಾಹಿತ್ಯ ಪ್ರಚಾರ ಪ್ರಣತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜ. 21ರಂದು ಸಂಜೆ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಪ್ರಣತಿ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕವಿ ಡುಂಡಿರಾಜ್‌, ವಿದ್ವಾಂಸ ಡಾ.ರಾಮಸ್ವಾಮಿ ಅಯ್ಯಂಗಾರ್‌ ಇರಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಣತಿ ರಾಘವೇಂದ್ರ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.