ADVERTISEMENT

ಲಂಡನ್‌: ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 16:05 IST
Last Updated 20 ಸೆಪ್ಟೆಂಬರ್ 2024, 16:05 IST
<div class="paragraphs"><p>ಬ್ರಿಟನ್‌ನಲ್ಲಿ ಆಯೋಜಿಸುವ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಕನ್ನಡ ಬಳಗ ಯುಕೆ’ ಅಧ್ಯಕ್ಷೆ&nbsp;ಸುಮನಾ ಗಿರೀಶ್ ಆಹ್ವಾನಿಸಿದರು.</p></div>

ಬ್ರಿಟನ್‌ನಲ್ಲಿ ಆಯೋಜಿಸುವ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಕನ್ನಡ ಬಳಗ ಯುಕೆ’ ಅಧ್ಯಕ್ಷೆ ಸುಮನಾ ಗಿರೀಶ್ ಆಹ್ವಾನಿಸಿದರು.

   

ಬೆಂಗಳೂರು: ಬ್ರಿಟನ್‌ನ ಕೊವೆಂಟ್ರಿಯಲ್ಲಿ ಕನ್ನಡಿಗರು ನವೆಂಬರ್‌ನಲ್ಲಿ ಆಚರಿಸುವ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ‘ಕನ್ನಡ ಬಳಗ ಯುಕೆ’ ವತಿಯಿಂದ ಆಹ್ವಾನಿಸಲಾಗಿದೆ.

ಬ್ರಿಟನ್‌ನಲ್ಲಿ ಬಳಗವನ್ನು ಮುನ್ನಡೆಸುತ್ತಿರುವ ‘ಕನ್ನಡ ಬಳಗ ಯುಕೆ’ಯ ಅಧ್ಯಕ್ಷೆ ಸುಮನಾ ಗಿರೀಶ್ ಅವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಆಮಂತ್ರಣ ನೀಡಿದರು.

ADVERTISEMENT

ಬ್ರಿಟನ್‌ನಲ್ಲಿ ಅಭಿಮಾನದಿಂದ ನಾಲ್ಕು ದಶಕಗಳಿಂದ ಕನ್ನಡದ ಸೇವೆ ಮಾಡಿಕೊಂಡು ಬರುತ್ತಿರುವ ಕನ್ನಡ ಬಳಗ ಯುಕೆ, ಸಾಗರದಾಚೆ ಕನ್ನಡತನವನ್ನ ಜಾಗೃತಗೊಳಿಸುತ್ತಾ ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಬಾರಿಯೂ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿಯನ್ನು ಬಿಂಬಿಸುವಂತಹ ಕಾರ್ಯಕ್ರಮ ರೂಪಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.