ADVERTISEMENT

ಸಫಲ್ ಉತ್ಪನ್ನ ಖರೀದಿಮಾಡಿದವರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 20:28 IST
Last Updated 19 ಡಿಸೆಂಬರ್ 2019, 20:28 IST
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಹಾಮಂಡಳಿ ಉಪಾಧ್ಯಕ್ಷ ಶಂಕ್ರಪ್ಪ ಗೌಡ ಪೊಲೀಸ್ ಪಟೇಲ ಮಾತನಾಡಿದರು. ಮಹಾಮಂಡಳಿಯ ನಿರ್ದೇಶಕಿ ಬಿ.ಟಿ. ಬೆನಕಟ್ಟಿ, ಮಹಾಂತೇಶ್ ಪಾಟೀಲ ಅತ್ತನೂರ, ವ್ಯವಸ್ಥಾಪಕ ನಿರ್ದೇಶಕ ಜೆ. ರಮಾನಂದ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಬಿ. ಸೋಮಶೇಖರ ಇದ್ದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಹಾಮಂಡಳಿ ಉಪಾಧ್ಯಕ್ಷ ಶಂಕ್ರಪ್ಪ ಗೌಡ ಪೊಲೀಸ್ ಪಟೇಲ ಮಾತನಾಡಿದರು. ಮಹಾಮಂಡಳಿಯ ನಿರ್ದೇಶಕಿ ಬಿ.ಟಿ. ಬೆನಕಟ್ಟಿ, ಮಹಾಂತೇಶ್ ಪಾಟೀಲ ಅತ್ತನೂರ, ವ್ಯವಸ್ಥಾಪಕ ನಿರ್ದೇಶಕ ಜೆ. ರಮಾನಂದ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಬಿ. ಸೋಮಶೇಖರ ಇದ್ದರು.   

ಬೆಂಗಳೂರು: ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ (ಕೆಒಎಫ್‌) ಕಾಡುಗೋಡಿ ಮತ್ತು ವೈಟ್‌ಫೀಲ್ಡ್‌ನಲ್ಲಿ ನಿರ್ಮಿಸಿರುವ ಮಳಿಗೆಯಲ್ಲಿ ಸಫಲ್ ಉತ್ಪನ್ನಗಳನ್ನು ಖರೀದಿಸಿ ಲಕ್ಕಿ ಕೂಪನ್ ಪಡೆದಿದ್ದ 101 ಮಂದಿಗೆ ಬುಧವಾರ ಬಹುಮಾನ ವಿತರಿಸಲಾಯಿತು.

ಮಳಿಗೆ ಪ್ರಾರಂಭೋತ್ಸವ ಮತ್ತು ಹಬ್ಬದ ಕೊಡುಗೆಯಾಗಿ ಸೆಪ್ಟೆಂಬರ್ 13ರಿಂದ ನವೆಂಬರ್ 15ರವರೆಗೆ ಗ್ರಾಹಕರಿಗೆ ಲಕ್ಕಿ ಕೂಪನ್ ವಿತರಿಸಲಾಗಿತ್ತು. ಲಾಟರಿ ಮೂಲಕ ಆಯ್ಕೆಯಾದ ವಿಜೇತರಿಗೆ ಎಇಡಿ ಟಿವಿ, ರೆಫ್ರಿಜರೇಟರ್‌, ವಾಷಿಂಗ್ ಮಷಿನ್ ಒಳಗೊಂಡಂತೆ 101 ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT