ADVERTISEMENT

‘ಬಸವಣ್ಣನ ಗುರು ಅಲ್ಲಮರನ್ನು ಮರೆತ ಜನ’

ಕೊಳದ ಮಠದ ಶಾಂತವೀರ ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 20:19 IST
Last Updated 14 ಜೂನ್ 2019, 20:19 IST
‌ಸೊಲ್ಲಾಪುರದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರಿಗೆ ‘ಅಲ್ಲಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. (ಎಡದಿಂದ) ನಿವೃತ್ತ ಐ.ಎ.ಎಸ್ ಅಧಿಕಾರಿ ಸಿ.ಸೋಮಶೇಖರ್, ಬೊಮ್ಮಲಿಂಗೇಶ್ವರ ಬೃಹನ್ಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ಮಾನವ ಹಕ್ಕು ಮತ್ತು ರಕ್ಷಣೆಯ ಸಂಸ್ಥಾಪಕ ಅಧ್ಯಕ್ಷ ಅನಿಲ್ ಕೊಹಿಲೆ, ಶಾಂತವೀರ ಸ್ವಾಮೀಜಿ ಮತ್ತು ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು -ಪ್ರಜಾವಾಣಿ ಚಿತ್ರ
‌ಸೊಲ್ಲಾಪುರದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರಿಗೆ ‘ಅಲ್ಲಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. (ಎಡದಿಂದ) ನಿವೃತ್ತ ಐ.ಎ.ಎಸ್ ಅಧಿಕಾರಿ ಸಿ.ಸೋಮಶೇಖರ್, ಬೊಮ್ಮಲಿಂಗೇಶ್ವರ ಬೃಹನ್ಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ಮಾನವ ಹಕ್ಕು ಮತ್ತು ರಕ್ಷಣೆಯ ಸಂಸ್ಥಾಪಕ ಅಧ್ಯಕ್ಷ ಅನಿಲ್ ಕೊಹಿಲೆ, ಶಾಂತವೀರ ಸ್ವಾಮೀಜಿ ಮತ್ತು ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಸವಶ್ರೀ ಪ್ರಶಸ್ತಿ ಪ್ರದಾನವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಆದರೆ, ಬಸವಣ್ಣನವರ ಗುರುಗಳಾ‌ದ ಅಲ್ಲಮ ಪ್ರಭುಗಳನ್ನು ಜನ ಮರೆತಿದ್ದಾರೆ’ ಎಂದುಕೊಳದ ಮಠ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಕೊಳದ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ‘ರೇಣುಕ, ಬಸವ, ಅಕ್ಕ ಮಹಾದೇವಿ ಜಯಂತ್ಯುತ್ಸವ ಹಾಗೂ ಅಲ್ಲಮಶ್ರೀ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಠಕ್ಕೆ ಅಗೌರವ ತೋರಿದ ರಾಜ ಕಾರಣಿಗಳು ಸೋಲನ್ನು ಕಂಡಿದ್ದಾರೆ. ಎಸ್‌.ಎಂ. ಕೃಷ್ಣ ಅವರು ನಮ್ಮ ಮಾತನ್ನು ಮೀರಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿ ಅಧಿಕಾರ ಕಳೆದುಕೊಂಡರು. ಅವರ ಬದಲಿಗೆ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾದರು. ಪರಂಪರೆಗೆ ಯಾರೂ ಧಕ್ಕೆ ತರಬಾರದು. ಜಲಕಂಠೇಶ್ವರನ ದರ್ಶನ ಪಡೆಯದೇ ರಾಜ್ಯದಲ್ಲಿ ಯಾವ ರಾಜಕಾರಣಿಯೂ ಮುಖ್ಯಮಂತ್ರಿಯಾಗಿಲ್ಲ’ ಎಂದರು.

ADVERTISEMENT

‘ಸರ್ಕಾರದಿಂದ ಮಠವು ಒಂದು ಪೈಸೆಯನ್ನೂ ಪಡೆದಿಲ್ಲ.ಅದರ ಅವ ಶ್ಯಕತೆಯೂ ನಮಗಿಲ್ಲ. ಬದಲಾಗಿ ಸಾವಿ ರಾರು ಎಕರೆ ಜಮೀನನ್ನು ಮಠದ ವತಿಯಿಂದಲೇ ದಾನ ಮಾಡಲಾಗಿದೆ’ ಎಂದರು.

ಬೆಂಗಳೂರು ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿ ಸಿ.ನಿರ್ಮಲಾ ಎಲಿಗಾರ್‌ ಹಾಗೂ ಲೀಲಾದೇವಿ ಆರ್‌.ಪ್ರಸಾದ್‌ ಉಪನ್ಯಾಸ ನೀಡಿದರು. ಕೆಳದಿಯ ಕವಲೇದುರ್ಗ ಮ‌ಹಾಸಂಸ್ಥಾನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗುರುಲಿಂಗ ಜಂಗಮದೇವರ ಮಠದ ನಟರಾಜ ಸ್ವಾಮೀಜಿ, ಓಂಕಾರಾಶ್ರಮ ಮಠದ ಮಧುಸೂದನಾನಂದಪುರಿ ಸ್ವಾಮೀಜಿ, ಗಂಜಾಂ ಮಠದ ಚಿದ್ಘನ್ನ ಸ್ವಾಮೀಜಿ,ಶಾಸಕ ಎಸ್‌.ವಿ.ರಾಮದಾಸ್‌ ಹಾಗೂ ಬಿಜೆಪಿ ಮುಖಂಡ ಚಿ.ನಾ.ರಾಮು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.