ಬೆಂಗಳೂರು: ‘ಬಸವಶ್ರೀ ಪ್ರಶಸ್ತಿ ಪ್ರದಾನವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಆದರೆ, ಬಸವಣ್ಣನವರ ಗುರುಗಳಾದ ಅಲ್ಲಮ ಪ್ರಭುಗಳನ್ನು ಜನ ಮರೆತಿದ್ದಾರೆ’ ಎಂದುಕೊಳದ ಮಠ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕೊಳದ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ‘ರೇಣುಕ, ಬಸವ, ಅಕ್ಕ ಮಹಾದೇವಿ ಜಯಂತ್ಯುತ್ಸವ ಹಾಗೂ ಅಲ್ಲಮಶ್ರೀ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಠಕ್ಕೆ ಅಗೌರವ ತೋರಿದ ರಾಜ ಕಾರಣಿಗಳು ಸೋಲನ್ನು ಕಂಡಿದ್ದಾರೆ. ಎಸ್.ಎಂ. ಕೃಷ್ಣ ಅವರು ನಮ್ಮ ಮಾತನ್ನು ಮೀರಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿ ಅಧಿಕಾರ ಕಳೆದುಕೊಂಡರು. ಅವರ ಬದಲಿಗೆ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾದರು. ಪರಂಪರೆಗೆ ಯಾರೂ ಧಕ್ಕೆ ತರಬಾರದು. ಜಲಕಂಠೇಶ್ವರನ ದರ್ಶನ ಪಡೆಯದೇ ರಾಜ್ಯದಲ್ಲಿ ಯಾವ ರಾಜಕಾರಣಿಯೂ ಮುಖ್ಯಮಂತ್ರಿಯಾಗಿಲ್ಲ’ ಎಂದರು.
‘ಸರ್ಕಾರದಿಂದ ಮಠವು ಒಂದು ಪೈಸೆಯನ್ನೂ ಪಡೆದಿಲ್ಲ.ಅದರ ಅವ ಶ್ಯಕತೆಯೂ ನಮಗಿಲ್ಲ. ಬದಲಾಗಿ ಸಾವಿ ರಾರು ಎಕರೆ ಜಮೀನನ್ನು ಮಠದ ವತಿಯಿಂದಲೇ ದಾನ ಮಾಡಲಾಗಿದೆ’ ಎಂದರು.
ಬೆಂಗಳೂರು ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿ ಸಿ.ನಿರ್ಮಲಾ ಎಲಿಗಾರ್ ಹಾಗೂ ಲೀಲಾದೇವಿ ಆರ್.ಪ್ರಸಾದ್ ಉಪನ್ಯಾಸ ನೀಡಿದರು. ಕೆಳದಿಯ ಕವಲೇದುರ್ಗ ಮಹಾಸಂಸ್ಥಾನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗುರುಲಿಂಗ ಜಂಗಮದೇವರ ಮಠದ ನಟರಾಜ ಸ್ವಾಮೀಜಿ, ಓಂಕಾರಾಶ್ರಮ ಮಠದ ಮಧುಸೂದನಾನಂದಪುರಿ ಸ್ವಾಮೀಜಿ, ಗಂಜಾಂ ಮಠದ ಚಿದ್ಘನ್ನ ಸ್ವಾಮೀಜಿ,ಶಾಸಕ ಎಸ್.ವಿ.ರಾಮದಾಸ್ ಹಾಗೂ ಬಿಜೆಪಿ ಮುಖಂಡ ಚಿ.ನಾ.ರಾಮು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.