ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಕೇಂದ್ರ ಕಚೇರಿಯ ರಿಲಯನ್ಸ್ನ ದೂರವಾಣಿ ಸಂಪರ್ಕ 3–4 ದಿನಗಳಿಂದ ಕಡಿತಗೊಂಡಿದೆ. ಬಿಲ್ ಪಾವತಿ ಮಾಡದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಇದರಿಂದಾಗಿ, ಕಚೇರಿಯ ಕೆಲಸಗಳು ಸ್ಥಗಿತಗೊಂಡಿವೆ ಎಂದು ಕಚೇರಿಗೆ ಭೇಟಿ ಕೊಟ್ಟವರು ದೂರಿದ್ದಾರೆ.
‘ಬಿಎಸ್ಎನ್ಎಲ್ ಸಂಪರ್ಕ ಇರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಕೆಪಿಎಸ್ಸಿ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.