ADVERTISEMENT

ಕೆಪಿಟಿಸಿಎಲ್‌ನಲ್ಲಿ ’ವನಸುಮದ ಬದುಕು’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:43 IST
Last Updated 14 ಏಪ್ರಿಲ್ 2019, 19:43 IST

ಬೆಂಗಳೂರು: ಕೆಪಿಟಿಸಿಎಲ್‌ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ’ವನಸುಮದ ಬದುಕು’ ಕಾರ್ಯಕ್ರಮ ಸಾಹಿತ್ಯ ಹಾಗೂ ಸಂಗೀತದ ರಸದೌತಣ ಉಣಬಡಿಸಿತು.

ನಗರದ ಬೆಳ್ಳಿಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಾಯಕ ಗರ್ತಿಕೆರೆ ರಾಘಣ್ಣ ಹಾಡುಗಳ ಮೂಲಕ ರಂಜಿಸಿದರು. ವೈದ್ಯೆ ಕಲ್ಯಾಣಿ ಕರ್ಕೆರೆ ಅವರು ನರದೌರ್ಬಲ್ಯ ಪರಿಹಾರದ ಬಗ್ಗೆ ಆರೋಗ್ಯ ಜಾಗೃತಿ ಮೂಡಿಸಿದರು.

ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಟಿ.ಎ.ಪಿ.ಶೆಣೈ ಅವರು ರಾಮನವಮಿ ಪ್ರಯುಕ್ತ ’ಮರ್ಯಾದಾ ಪುರುಷೋತ್ತಮ ರಾಮಚಂದ್ರ‘ ಕುರಿತು ಪ್ರವಚನ ನೀಡಿದರು.

ADVERTISEMENT

ಕೆಪಿಟಿಸಿಎಲ್‌ ಸಂಘದ ವಾಸುದೇವ ಕಾರಂತ, ಮಾಜಿ ಅಧ್ಯಕ್ಷ ವಿ.ಜಿ.ಪಂಡಿತ್, ಕವಯತ್ರಿ ಕೊಪ್ಪರಂ ಅನ್ನಪೂರ್ಣ,ಅನುವಾದಕಿ ಪೂರ್ಣಿಮಾ ಗೋಪಾಲ್‌ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.