ಕೆ.ಆರ್.ಪುರ: ವಿಭೂತಿಪುರ ಕೆರೆ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಭಾನುವಾರ ನೆಡಲಾಯಿತು. ವಿಭೂತಿಪುರ ಕೆರೆ ಸಂರಕ್ಷಣಾ ತಂಡದಿಂದ ಆಯೋಜಿಸಿದ್ದ ವನಮಹೋತ್ಸವಕ್ಕೆಪಾಲಿಕೆ ಸದಸ್ಯ ಎಸ್.ಜಿ.ನಾಗರಾಜ್ ಚಾಲನೆ ನೀಡಿದರು.
‘ಎಲ್ಲರು ಪರಿಸರ ಕಾಳಜಿ ಹೊಂದಿದರೆ ನಾಡು ಸಮೃದ್ಧವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ನೀರಿನ ಮಟ್ಟ ವೃದ್ಧಿಸಲು ಪರಿಸರ ಸಂರಕ್ಷಣೆ ಮಾಡಬೇಕು. ವಿಭೂತಿಪುರ ಕೆರೆಯನ್ನು ಹಸಿರು ಉದ್ಯಾನವಾಗಿ ಪರಿವರ್ತಿಸಿ ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಮಾಡಲಾಗುವುದು. ₹4 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೆರೆ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ, ತೆರೆದ ಜಿಮ್, ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು’ ಎಂದರು.
‘ಬೆಂಗಳೂರು ನಗರವನ್ನು ಸೆಪ್ಟೆಂಬರ್ ವೇಳೆಗೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿಸಲಾಗುತ್ತಿದೆ. ಕೇವಲ ಸಸಿ ನೆಟ್ಟರೆ ಸಾಲದು, ಅವುಗಳಿಗೆ ಪ್ರತಿನಿತ್ಯ ನೀರುಣಿಸಿ ಪೋಷಿಸಬೇಕು’ ಎಂದು ಹೇಳಿದರು.
ಎಚ್ಎಎಲ್ ವಾರ್ಡ್ ಸದಸ್ಯ ಮಂಜುನಾಥ್ ಮಾತನಾಡಿ, ‘ವಿಭೂತಿಪುರ ಕೆರೆ ನೀರನ್ನು ನಿರ್ವಹಣೆ ಮಾಡಲು ಸದ್ಯದಲ್ಲೆ ಎಸ್ಟಿಪಿ ನಿರ್ಮಾಣ ಮಾಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.