ADVERTISEMENT

ವಾಹನ ಸವಾರರಿಂದ ಹಣ ವಸೂಲಿ ದೂರು: ಆರ್‌ಟಿಒ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ 

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 3:59 IST
Last Updated 30 ಸೆಪ್ಟೆಂಬರ್ 2022, 3:59 IST
ಆರ್‌ಟಿಒ ಅಧಿಕಾರಿಗಳ ದಾಳಿ
ಆರ್‌ಟಿಒ ಅಧಿಕಾರಿಗಳ ದಾಳಿ    

ಹುಮನಾಬಾದ್ (ಬೀದರ್‌ ಜಿಲ್ಲೆ) : ವಾಹನ ಸವಾರರಿಂದ ಹಣ ವಸೂಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮೋಳಕೆರಾ ಗ್ರಾಮ ಸಮೀಪ ಕಲಬುರಗಿ ಲೋಕಾಯುಕ್ತ ಅಧೀಕ್ಷಕ ಪಿ. ಕರ್ನೂಲ್ ನೇತೃತ್ವದ ತಂಡ ಬೆಳಗಿನ ಜಾವ ದಾಳಿ ನಡೆಸಿದೆ.

ದಾಳಿ ವೇಳೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಪತ್ತೆಯಾಗಿದೆ. ವಾಹನಗಳಿಂದ ಸಂಗ್ರಹಿಸುವ ಹಣ ಹಾಗೂ ಕಚೇರಿಯಲ್ಲಿ ದೊರಕಿರುವ ಹಣ ತಾಳೆ ಮಾಡಿ ನೋಡಿದಾಗ ಹೆಚ್ಚುವರಿ ಹಣ ಸಂಗ್ರಹ ಮಾಡಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ಕಲಬುರಗಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡಪಾಟೀಲ, ಬೀದರ್ ಡಿವೈಎಸ್ಪಿ ಎನ್.ಎಂ ಓಲೇಕರ್ ಹಾಗೂ 30 ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.