ಭರತನಾಟ್ಯ ಕಲೆಯಲ್ಲಿ ಭವಿಷ್ಯ ಕಾಣುವ ಹಂಬಲದ ಗಾಯತ್ರಿ ಹಾಗೂ ರಿತಿಕಾ ಸಹೋದರಿಯರು ಭಾನುವಾರ ಎಡಿಎ ರಂಗಮಂದಿರದಲ್ಲಿ ನಡೆದ ಭರತನಾಟ್ಯ ರಂಗಪ್ರವೇಶದ ಮೂಲಕ ತಮ್ಮ ಕನಸಿನ ಮೊದಲ ಮೊಟ್ಟಿಲು ಏರಿದ್ದಾರೆ.
ಗಾಯತ್ರಿ ಹಾಗೂ ರಿತಿಕಾ ಅವರ ನಾಟ್ಯ ಆಸಕ್ತಿ ಚಿಗುರಿದ್ದು ಬಾಲ್ಯದಿಂದಲೇ. ಈ ಇಬ್ಬರು ಸಹೋದರಿಯರಲ್ಲಿ ನಾಟ್ಯ ಪ್ರೀತಿಗೆ ಮೂಲ ಪ್ರೇರಣೆ ಭರತನಾಟ್ಯ ಕಲಾವಿದೆಯೂ ಆಗಿರುವ ತಾಯಿ ಅನುರಾಧಾ. ತಮ್ಮ ಅಪೂರ್ಣ ಕನಸನ್ನು ಮಕ್ಕಳ ಮೂಲಕ ನನಸಾಗಿಸುತ್ತಿದ್ದಾರೆ. ತಾಯಿಯ ಮಾರ್ಗದರ್ಶನದಲ್ಲಿಯೇ ಆರಂಭಿಕ ನೃತ್ಯ ಪಾಠ ಕಲಿತ ಈ ಸಹೋದರಿಯರಿಗೆ ಈಗ ಮಿಥುನ್ ಶಾಮ್ ಗುರು.
ಗಾಯತ್ರಿ ಅವರು ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂ.ಟೆಕ್ ಅಧ್ಯಯನ ಮಾಡುತ್ತಿದ್ದಾರೆ. ರಿತಿಕಾ ಅದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ.
ರಂಗಪ್ರವೇಶ ಕಾರ್ಯಕ್ರಮದಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆ ಆನಂದ ಶಂಕರ ಜಯಂತ್, ಆರ್ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.