ADVERTISEMENT

ಮಠಾಧಿಪತಿ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 19:11 IST
Last Updated 17 ಮಾರ್ಚ್ 2021, 19:11 IST

ಬೆಂಗಳೂರು: ಯಲಹಂಕ ತಾಲ್ಲೂಕಿನ ಹುಣಸಮಾರನಹಳ್ಳಿ ಶ್ರೀ ಮದ್ದೇವಣಾಪುರ ದೇವ ಸಿಂಹಾಸನಾ ಮಠಕ್ಕೆ ಪೀಠಾಧ್ಯಕ್ಷರನ್ನು ಕೂಡಲೇ ನೇಮಕ ಮಾಡಬೇಕು ಎಂದು ಮಠದ ಅಧ್ಯಕ್ಷ ಎಸ್‌.ಎ. ರುದ್ರಾರಾಧ್ಯ ಒತ್ತಾಯಿಸಿದರು.

‘ಮಠಕ್ಕೆ ಪೀಠಾಧಿಪತಿಯಾಗಿದ್ದ ಗುರುನಂಜೇಶ್ವರಸ್ವಾಮಿ ಅವರನ್ನು ದುರ್ವತನೆ ಕಾರಣಕ್ಕೆ ವಜಾಗೊಳಿಸಲಾಗಿದೆ. ಆದರೆ, ಈಗಲೂ ನಾನೇ ಪೀಠಾಧ್ಯಕ್ಷ ಎಂದು ಹೇಳಿಕೊಂಡು ಮಠದ ಆಸ್ತಿ ದೋಚುವ ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT