ಬೆಂಗಳೂರು: ‘ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಉದ್ದೇಶಿಸಿ ‘ಮುಸ್ಲಿಮರನ್ನು ಕರೆಸಿ ಹಂದಿ ಮಾಂಸದ ಊಟ ಬಡಿಸಿ’ ಎಂದಿರುವ ಸಂಸದ ಪ್ರತಾಪ ಸಿಂಹ ಅವರ ಪ್ರಚೋದನಕಾರಿ ಹೇಳಿಕೆ ಖಂಡನೀಯ’ ಎಂದು ರಾಜ್ಯ ಆದಿಜಾಂಬವ ಸಂಘ ತಿಳಿಸಿದೆ.
ಸಂಘದ ಅಧ್ಯಕ್ಷ ಜಂಬೂದ್ವೀಪ ಸಿದ್ಧರಾಜು, ‘ಹಂಸಲೇಖ ಅವರು ಯಾರನ್ನೋ ಪ್ರಚೋದಿಸುವ ಅಥವಾ ನಿಂದಿಸುವ ಮಾತುಗಳನ್ನು ಆಡಿಲ್ಲ. ಸಮಸಮಾಜ ನಿರ್ಮಾಣದಲ್ಲಿ ನಂಬಿಕೆ ಇರುವ ಹಾಗೂ ಅಸ್ಪೃಶ್ಯತೆ ವಿರೋಧಿಸುವ ಸಹೃದಯರಂತೆ ಹಂಸಲೇಖ ಅವರೂ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ’ ಎಂದಿದ್ದಾರೆ.
‘ಆದರೆ, ಈ ವಿಚಾರದಲ್ಲಿ ಕೆಲ ಮತಾಂಧರು ಹಾಗೂ ಜಾತಿವಾದಿಗಳು ಪುಕ್ಕಟೆ ಪ್ರಚಾರಕ್ಕಾಗಿ ಹಂಸಲೇಖ ಅವರನ್ನು ನಿಂದಿಸುವ ಪ್ರಯತ್ನ ಮಾಡಿರುವುದನ್ನುಆದಿಜಾಂಬವ ಸಂಘ ಖಂಡಿಸುತ್ತದೆ’ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.