ADVERTISEMENT

ನಾಗಭೂಷಣ್‌ಗೆ ಪ್ರಶಂಸನೀಯ ಪತ್ರ

​ಪ್ರಜಾವಾಣಿ ವಾರ್ತೆ
Published 29 ಮೇ 2019, 17:24 IST
Last Updated 29 ಮೇ 2019, 17:24 IST
ನಾಗಭೂಷಣ್‌ ಅವರಿಗೆ ಪ್ರಶಂಸನೀಯ ಪತ್ರ ನೀಡುತ್ತಿರುವುದು
ನಾಗಭೂಷಣ್‌ ಅವರಿಗೆ ಪ್ರಶಂಸನೀಯ ಪತ್ರ ನೀಡುತ್ತಿರುವುದು   

ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ಆರ್‌.ಟಿ. ನಗರ ವ್ಯಾಪ್ತಿಯಲ್ಲಿ ಸುರಿದ ವ್ಯಾಪಕ ಮಳೆಗೆ ಮರಗಳು ಉರುಳಿ ಬಿದಿದ್ದು ಅವುಗಳನ್ನು ತೆರವುಗೊಳಿಸಿದ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ನಾಗಭೂಷಣ್‌ಅವರನ್ನು ಸಂಚಾರ ಪೊಲೀಸ್‌ ವಿಭಾಗ ಪ್ರಶಂಸೆ ವ್ಯಕ್ತಪಡಿಸಿದೆ.

ಮೇ 26 ರಾತ್ರಿ ಸುರಿದ ಮಳೆಗೆ ಆರ್‌.ಟಿ.ನಗರ ಸಂಚಾರ ಠಾಣೆ ವ್ಯಾಪ್ತಿಯ ಜೆ.ಸಿ ರಸ್ತೆಯಲ್ಲಿ ಹಲವುಮರಗಳು ಉರುಳಿ ಬಿದಿದ್ದವು.ನಾಗಭೂಷಣ್‌ ಮತ್ತು ಅವರ ತಂಡ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.

ಉತ್ತರ ವಿಭಾಗದ ಸಂಚಾರ ಪೊಲೀಸ್‌ಉಪ ಆಯುಕ್ತರಾದ ಸರಾಫಾತಿಮಾ ಅವರು ನಾಗಭೂಷಣ್‌ ಅವರಿಗೆ ಪ್ರಶಂಸೆಯ ಪತ್ರವನ್ನು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.