ನಾಗೇಂದ್ರ ಸ್ವಾಮಿ
ಬೆಂಗಳೂರು: ಗೋಕುಲ ಎಜುಕೇಷನ್ ಫೌಂಡೇಷನ್ನ (ಜಿ.ಇ.ಎಫ್–ಮೆಡಿಕಲ್) ಆರೋಗ್ಯ ಸೇವೆಗಳಿಗೆ ನೂತನ ಮುಖ್ಯ ಕಾರ್ಯನಿರ್ವಾಹಕರಾಗಿ ಡಾ. ಎಸ್. ಸಿ. ನಾಗೇಂದ್ರ ಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಹಾಗೂ ಜಿ.ಇ.ಎಫ್ನ (ಮೆಡಿಕಲ್) ವ್ಯಾಪ್ತಿಯಲ್ಲಿ ಬರುವ ಇತರ ಅಂಗಸಂಸ್ಥೆಗಳ ಆರೋಗ್ಯ ಸೇವೆಗಳಿಗೆ ಮುಖ್ಯಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಮತ್ತು ನ್ಯೂಯಾರ್ಕ್ನ ಮೌಂಟ್ ಸಿನಾಯಿ ಆಸ್ಪತ್ರೆ ನಡುವೆ ಸಮನ್ವಯ ನಡೆಸುವ ಜವಾಬ್ದಾರಿಯನ್ನು ಸಹನೀಡಲಾಗಿದೆ.
ಡಾ. ಸ್ವಾಮಿ ಅವರು ಭಾರತ, ಮಧ್ಯಪ್ರಾಚ್ಯ ಮತ್ತು ಪೂರ್ವ ಏಷ್ಯಾದಲ್ಲಿರುವ ಪ್ರಮುಖ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.