ಬೆಂಗಳೂರು: ‘ನಮ್ಮ ಮೆಟ್ರೊ’ದ ಮಹಾಕವಿ ಕುವೆಂಪು ರಸ್ತೆ ಹಾಗೂ ರಾಜಾಜಿನಗರ ನಿಲ್ದಾಣಗಳ ನಡುವಿನ ಪಿಲ್ಲರ್ನ (ಸಂಖ್ಯೆ 221) ಬೇರಿಂಗ್ ಬದಲಾವಣೆ ಕಾರ್ಯ ಭಾನುವಾರ ಯಶಸ್ವಿಯಾಗಿ ನಡೆಯಿತು. ಆದರೆ, ಬೆಳಿಗ್ಗೆ 9ರ ಬದಲು, 10ಕ್ಕೆ ರೈಲು ಸಂಚಾರ ಪುನರಾರಂಭಗೊಂಡಿತು.
ಕಂಬದಲ್ಲಿ ಬೇರಿಂಗ್ ಹಾಳಾಗಿದ್ದು, ಹೊಸ ಬೇರಿಂಗ್ ಅಳವಡಿಸಲಾಯಿತು. ನಿರ್ವಹಣಾ ಕಾಮಗಾರಿಗಾಗಿ ಬೆಳಿಗ್ಗೆ 7 ರಿಂದ 9ರವರೆಗೆ ಮಲ್ಲೇಶ್ವರದ ಸಂಪಿಗೆ ರಸ್ತೆ ನಿಲ್ದಾಣದಿಂದ ನಾಗಸಂದ್ರ ನಿಲ್ದಾಣವರೆಗೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ತಿಳಿಸಿತ್ತು. ಆದರೆ, ನಿರ್ವಹಣಾ ಕಾರ್ಯ ತಡವಾಗಿದ್ದರಿಂದ 9 ಗಂಟೆ ಬದಲು 10 ಗಂಟೆಗೆ ರೈಲು ಸಂಚಾರ ಮರು ಆರಂಭವಾಯಿತು.
ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆಯ ನೇರಳೆ ಮಾರ್ಗ ಹಳೆಯದಾಗಿರುವುದರಿಂದ ಆಗಾಗ್ಗೆ ಬೇರಿಂಗ್ ಬದಲಾವಣೆ ಮಾಡಬೇಕಾದ ಅನಿವಾರ್ಯ ಉಂಟಾಗಿತ್ತು. ಈಗ ಮೊದಲ ಬಾರಿಗೆ ಹಸಿರು ಮಾರ್ಗದಲ್ಲಿ ಬೇರಿಂಗ್ ಬದಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.