ADVERTISEMENT

ನೇಪಾಳದ ಯುವಕನ ಕೊಲೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 16:08 IST
Last Updated 29 ಜೂನ್ 2022, 16:08 IST

ಬೆಂಗಳೂರು: ನೇಪಾಳದ ಯುವಕ ಸುಶೀಲ್‌ (25) ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ಧಾರೆ.

ನೇಪಾಳದ ಸಾಗರ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟಿರುವ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜೀವನ್‌ ಬಿಮಾ ನಗರದಲ್ಲಿ ಸುಶೀಲ್‌ ಅವರ ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.

ADVERTISEMENT

ಕೊಲೆಗೆ ಕಾರಣ?:

ಸಾಗರ್ ನೆಲೆಸಿದ್ದ ಸ್ಥಳದ ಸುತ್ತಮುತ್ತ ಸುಶೀಲ್‌ ಕಳವು ಮಾಡುತ್ತಿದ್ದ. ಅಲ್ಲಿನ ನಿವಾಸಿಗಳು ಸಾಗರ್‌ ಮೇಲೆಯೇ ಅಪಾದನೆ ಮಾಡಿದ್ದರು. ಇದರಿಂದ ಬೇಸರಗೊಂಡ ಸಾಗರ್‌ ಇತರೆ ಮೂವರೊಂದಿಗೆ ಸುಶೀಲ್‌ನನ್ನು ಹಗ್ಗದಲ್ಲಿ ಕಟ್ಟಿಹಾಕಿ, ಥಳಿಸಿದ್ದರು. ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಆರೋಪಿಗಳು ಪರಾರಿಯಾಗಿದ್ದರು ಎಂದು ಪೂರ್ವವಲಯದ ಡಿ.ಸಿ.ಪಿ ಭೀಮಾಶಂಕರ್‌ ಗುಳೇದ ತಿಳಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.