ಕಾವೇರಿ ನೀರು ಪೂರೈಕೆ ಹೊಸ ಕೊಳವೆಗಳ ಅಳವಡಿಕೆಗೆ ಚಾಲನೆ
ರಾಜರಾಜೇಶ್ವರಿನಗರ: ‘ತುಂಬಾ ಹಳೆಯದಾಗಿದ್ದ (ಸಣ್ಣ ಕೊಳವೆ) ಕಾವೇರಿ ನೀರು ಪೂರೈಸುವ ಕೊಳವೆಗಳನ್ನು ಬದಲಿಸಿ ಹೊಸ ಕೊಳವೆಗಳನ್ನು ಎಲ್ಲ ಬಡಾವಣೆಗಳಲ್ಲಿ ಅಳವಡಿಸಲಾಗುತ್ತಿದೆ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು ಹೇಳಿದರು
ಉಲ್ಲಾಳು ವಾರ್ಡ್ನ ಕರ್ನಾಟಕ ಲೋಕಸೇವಾ ಆಯೋಗದ ಬಡಾವಣೆಯ ಎಲ್ಲ ಮುಖ್ಯ, ಅಡ್ಡ ರಸ್ತೆಗಳಿಗೆ ನೀರು ಪೂರೈಕೆಯ ಕೊಳವೆಗಳ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ಜಲಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೀಪಕ್, ಸಹಾಯಕ ಎಂಜಿನಿಯರ್ ನಾಗರತ್ನ, ನಾಗದೇವನಹಳ್ಳಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಎಸ್.ಟಿ.ಪ್ರಕಾಶ್ಗೌಡ, ಕೆಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ನಾಗರಾಜು, ರಮೇಶ್ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.