ADVERTISEMENT

ಕ್ಯಾಸಿನೊ ಚಿಂತನೆ ಇಲ್ಲ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 5:39 IST
Last Updated 27 ಫೆಬ್ರುವರಿ 2020, 5:39 IST
ಸಚಿವ ಸಿ.ಟಿ.ರವಿ
ಸಚಿವ ಸಿ.ಟಿ.ರವಿ   

ಬೆಂಗಳೂರು: ರಾಜ್ಯದಲ್ಲಿ ಕ್ಯಾಸಿನೊ ಆರಂಭಿಸುವ ಚಿಂತನೆ ಸರ್ಕಾರಕ್ಕಾಗಲಿ ಅಥವಾ ಪಕ್ಷಕ್ಕಾಗಲಿ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಕ್ಯಾಸಿನೊ ಆರಂಭಿಸಲು ಸರ್ಕಾರ ಅನುಮತಿ ನೀಡುತ್ತದೆ ಎಂದು ಎಲ್ಲೂ ಹೇಳಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಲವು ದೇಶಗಳಲ್ಲಿ ಜೂಜಿನ ಪ್ರವಾಸೋದ್ಯಮವಿದೆ. ಅಲ್ಲಿಗೆ ನಮ್ಮ ರಾಜ್ಯದ ಸಾಕಷ್ಟು ಜನರು ಜೂಜು ಆಡಲೆಂದೇ ಹೋಗುತ್ತಾರೆ. ನಮ್ಮ ರಾಜ್ಯದಲ್ಲೂ ಆಯ್ದ ಕೆಲವು ಕಡೆಗಳಲ್ಲಿ ಆರಂಭಿಸಲು ಅವಕಾಶವಿದೆ ಎಂದು ಹೇಳಿದ್ದೆ. ಇದರ ಜತೆಗೆ ಹಳ್ಳಿ ಪ್ರವಾಸೋದ್ಯಮ, ಪರಂಪರೆ ಪ್ರವಾಸೋದ್ಯಮ, ಮುಂಗಾರು
ಪ್ರವಾಸೋದ್ಯಮಕ್ಕಿರುವ ಅವಕಾಶಗಳ ಬಗ್ಗೆಯೂ ಹೇಳಿದ್ದೆ. ಇವುಗಳ ಬಗ್ಗೆ ಪ್ರಚಾರ ಕೊಡದೆ ಕೇವಲ ಕ್ಯಾಸಿನೊ ಬಗ್ಗೆ ವ್ಯತಿರಿಕ್ತ ಪ್ರಚಾರ ನೀಡಲಾಗಿದೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.