ಬೆಂಗಳೂರು: ಜೆ.ಪಿ. ನಗರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಭಾಗದ ಸುತ್ತ–ಮುತ್ತಲಿನ ಪ್ರದೇಶದಲ್ಲಿ ಇದೇ 15ರಿಂದ 20ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಬಿಸಿಎಂಸಿ ಬಡಾವಣೆ, ತಿಪ್ಪಸಂದ್ರ, ಚೆನ್ನಮ್ಮ ಉದ್ಯಾನ,ಆರ್ಬಿಐ ಬಡಾವಣೆ, 14ನೇ ಮುಖ್ಯರಸ್ತೆ, ಜೆ.ಪಿ. ನಗರ 6ನೇ ಹಂತ, ಸಾರಕ್ಕಿ ತೋಟ, ರೋಸ್ ಗಾರ್ಡನ್, ಸಿದ್ದೇಶ್ವರ ಥಿಯೇಟರ್, ಸಿಂಧೂರ್ ಕಲ್ಯಾಣಮಂಟಪ, ಈಶ್ವರ ಬಡಾವಣೆ, ಶರತ್ ನಗರ, ಶಿವಶಕ್ತಿ ನಗರ, ಬೀರಪ್ಪ ಗಾರ್ಡನ್, ಚುಂಚಘಟ್ಟ ಮುಖ್ಯರಸ್ತೆ, ದೊಡ್ಡಮನೆ ಕೈಗಾರಿಕಾ ಪ್ರದೇಶ, ರಾಜೀವ್ ಗಾಂಧಿ ರಸ್ತೆ, ಚರ್ಚ್ ರಸ್ತೆ, ಶ್ರೀನಿವಾಸ ಕಲ್ಯಾಣಮಂಟಪ ರಸ್ತೆ, ಕನಕಪುರ ಮುಖ್ಯರಸ್ತೆ, ಸಾರಕ್ಕಿ ಕೆರೆ ಸುತ್ತ–ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.