ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 13ರಿಂದ 15ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಪುಟ್ಟೇನಹಳ್ಳಿ, ನಮ್ಮ ಮನೆ ಹೋಟೆಲ್ ರಸ್ತೆ, ರಾಜೀವ್ ಗಾಂಧಿ ರಸ್ತೆ, ಅಬ್ಬಿಗೆರೆ, ಸಾಯಿನಗರ, ಸಂಭ್ರಮ ಕಾಲೇಜು, ಬಿಎಚ್ಇಎಲ್, ಸಹಕಾರ ನಗರ, ಹೆಗಡೆ ನಗರ, ಬ್ಯಾಟರಾಯನಪುರ, ಜಕ್ಕೂರು ವಾಯುನೆಲೆ, ಎಂಎಲ್ಎ ಬಡಾವಣೆ, ನಿಸರ್ಗ ಬಡಾವಣೆ, ಪೈಪ್ಲೈನ್ ರಸ್ತೆ, ಕೆಂಪೇಗೌಡ ಬಡಾವಣೆ, ಜಾಲಹಳ್ಳಿ, ಬಾಹುಬಲಿ ನಗರ, ಡಾ. ರಾಜಕುಮಾರ್ ರಸ್ತೆ, ಪ್ರಕಾಶ್ ನಗರ, ಸಾಯಿಬಾಬಾ ನಗರ, ನಂದಿನಿ ಬಡಾವಣೆ, ಸುಬ್ರಹ್ಮಣ್ಯ ನಗರ, ಎಲ್.ಎನ್. ಪುರ, ಐಐಎಸ್ಸಿ, ವಯ್ಯಾಲಿಕಾವಲ್, ಶಶಿಕಿರಣ್ ಅಪಾರ್ಟ್ಮೆಂಟ್, ಮಲ್ಲೇಶ್ವರ, ಯಶವಂತಪುರ ಮೊದಲನೇ ಮುಖ್ಯರಸ್ತೆ, ಗಣೇಶ ಸಾಮಿಲ್ ರಸ್ತೆ, ಪೀಣ್ಯ, ಮಹಾಲಕ್ಷ್ಮಿ ಬಡಾವಣೆ, ಪಶ್ಚಿಮ ಕಾರ್ಡ್ ರಸ್ತೆ ಸುತ್ತ–ಮುತ್ತಲಿನ ಪ್ರದೇಶ.
ಕವಿಕಾ ಬಡಾವಣೆ, ವೆಂಕಟೇಶ್ವರ ಕೊಳೆಗೇರಿ, ನಾಯಂಡಹಳ್ಳಿ ಕೊಳೆಗೇರಿ, ಐಟಿಐ ಬಡಾವಣೆ, ಜನಪ್ರಿಯ ಬಡಾವಣೆ, ಮೈಸೂರು ರಸ್ತೆ, ಬಸವೇಶ್ವರ ಎಲೆಕ್ಟ್ರಾನಿಕ್ಸ್, ಮುನೇಶ್ವರ ಬ್ಲಾಕ್.
ಇದೇ 14 ಮತ್ತು 15 ರಂದು ವ್ಯತ್ಯಯ: ಕಸ್ತೂರಬಾ ನಗರ, ಟಿಂಬರ್ ಯಾರ್ಡ್ ಬಡಾವಣೆ, ಜನಪ್ರಿಯ ಬಡಾವಣೆ, ಶಾಸ್ತ್ರಿ ನಗರ, ಐಟಿಐ ಬಡಾವಣೆ, ಬಿಡಿಎ ಬಡಾವಣೆ, ಮೈಸೂರು ರಸ್ತೆ ಸುತ್ತ–ಮುತ್ತಲಿನ ಪ್ರದೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.