ADVERTISEMENT

13ರಂದು ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 20:00 IST
Last Updated 11 ಜೂನ್ 2020, 20:00 IST

ಬೆಂಗಳೂರು: ಕಂಠೀರವ ವಿದ್ಯುತ್‌ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 13ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ವಿದ್ಯುತ್‌ ವ್ಯತ್ಯಯ ಎಲ್ಲೆಲ್ಲಿ?:
ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್, ಹೈಕೋರ್ಟ್, ರಾಜಭವನ, ವಸಂತನಗರ, ಮುಖ್ಯಮಂತ್ರಿಯವರ ನಿವಾಸ ಮತ್ತು ಸಪ್ತ ಸಚಿವರ ವಸತಿಗೃಹ, ಮುಖ್ಯ ಕಾರ್ಯದರ್ಶಿ ನಿವಾಸ, ಸ್ಯಾಂಕಿ ರಸ್ತೆ, ಬಾಲಬ್ರೂಯಿ ಅತಿಥಿಗೃಹ, ಕುಮಾರಕೃಪಾ ಅತಿಥಿಗೃಹ, ಮಿಲ್ಲರ್ಸ್ ರಸ್ತೆ, ಐ.ಎ.ಎಸ್ ಅಧಿಕಾರಿಗಳ ವಸತಿಗೃಹ, ಕನ್ನಿಂಗ್‌ಹ್ಯಾಂ ರಸ್ತೆ, ಗಾಂಧಿನಗರ, ಮಾಗಡಿ ರಸ್ತೆ, ಓಕಳೀಪುರ, ಚಿಕ್ಕಪೇಟೆ, ಕಾಟನ್‍ಪೇಟೆ, ಹೋಟೆಲ್ ಶಾಂಗ್ರೀಲಾ, ಕಾವೇರಿ ಭವನ, ಕಂದಾಯ ಭವನ, ರಾಮಣ್ಣಪೇಟೆ, ಸಿ.ಟಿ.ಸ್ಟ್ರೀಟ್ ಮತ್ತು ಅವೆನ್ಯೂ ರಸ್ತೆಯ ಭಾಗ, ಅನ್ನದಾನಪ್ಪ ಲೇನ್, ಎ.ಟಿ. ಸ್ಟ್ರೀಟ್, ಕೆ.ಎ.ಎಸ್. ಲೇನ್, ನೃಪತುಂಗ ರಸ್ತೆ, ಯು.ವಿ.ಸಿ.ಇ, ಕೃಷಿ ವಿಜ್ಞಾನ ಸಂಸ್ಥೆ ಕಚೇರಿ, ಆರ್.ಬಿ.ಐ. ಪೊಲೀಸ್ ಕಮೀಷನರ್ ಕಚೇರಿ, ವೈ.ಎಂ.ಸಿ.ಎ, ಸುಂಕಲ್‍ಪೇಟೆ,ನಗರ್ತಪೇಟೆ ಮುಖ್ಯರಸ್ತೆ, ಗಾಣಿಗರ ಲೇನ್, ಕೆ.ಜಿ.ರಸ್ತೆ, ಕಬ್ಬನ್‍ಪೇಟೆ, ಒ.ಟಿ.ಸಿ. ರಸ್ತೆ, ಶಾರದಾ ಥಿಯೇಟರ್ ಹಿಂಭಾಗ, ಎಸ್.ಪಿ ರಸ್ತೆ, ಎಸ್.ಜೆ.ಪಿ ರಸ್ತೆ ಹಾಗೂಧರ್ಮರಾಯಸ್ವಾಮಿ ದೇವಸ್ಥಾನದ ಮತ್ತು ಸುತ್ತಲಿನ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT