ADVERTISEMENT

ವಿದ್ಯುತ್ ವ್ಯತ್ಯಯ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 17:55 IST
Last Updated 5 ಫೆಬ್ರುವರಿ 2021, 17:55 IST

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 7ರಿಂದ 12ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

7ರಂದು ಕೃಷ್ಣಾನಂದ ನಗರ, ವಿಜಯಾನಂದ ನಗರ, ಡಾಲರ್‌ ಸ್ಕೀಂ ರಸ್ತೆ, ರಕ್ಷಾ ಆಸ್ಪತ್ರೆ, ಪೊಲೀಸ್‌ ಕ್ವಾರ್ಟರ್ಸ್, ನಂಜುಂಡೇಶ್ವರ ನಗರ, ಆರ್.ಎಂ.ಸಿ. ಯಾರ್ಡ್, ಮಾರಪ್ಪನ ಪಾಳ್ಯ, ಯಶವಂತಪುರ ಕೈಗಾರಿಕಾ ಪ್ರದೇಶ, ದೂರವಾಣಿ ಕೇಂದ್ರ, ಶಂಕರನಗರ, ಶ್ರೀಕಂಠೇಶ್ವರ ನಗರ, ಸೋಮಶೇಶ್ವರ ನಗರ, ಎಪಿಎಂಸಿ, ಮಹಾಲಕ್ಷ್ಮಿ ಬಡಾವಣೆ, ಎಜಿಬಿಜಿ ಬಡಾವಣೆ, ಗಣೇಶ ಬ್ಲಾಕ್, ಈಜುಕೊಳ ಸುತ್ತ–ಮುತ್ತಲಿನ ಪ್ರದೇಶ, ರೈಲ್ವೆ ಬಡಾವಣೆ, ಕಂಠೀರವ ನಗರ, ನಂದಿನಿ ಬಡಾವಣೆ, ಎಫ್‌ಟಿಐ ಕ್ವಾರ್ಟರ್ಸ್, ಪರಿಮಳ ನಗರ, ಗೊರಗುಂಟೆ ಪಾಳ್ಯ, ದಾಸನಾಯಕನ ಪಾಳ್ಯ, ಗೌತಮ ನಗರ, ಶ್ರೀನಿವಾಸ ನಗರ, ಬಿಎಚ್‌ಇಎಲ್ ಬಡಾವಣೆ, ಜೆಸಿ. ನಗರ, ಕೆಇಬಿ ಕಚೇರಿ, ವಿ.ಕೆ. ರಾಮಣ್ಣ ಬ್ಲಾಕ್ ಸುತ್ತ–ಮುತ್ತಲಿನ ಪ್ರದೇಶ.

ಫೆ.8ರಿಂದ 12ರವರೆಗೆ ಸೋಪ್ ಫ್ಯಾಕ್ಟರಿ, ಹರಿಹರ ನಗರ, ಬಿಬಿಎಂಪಿ ಉದ್ಯಾನ, ಬಿಸಿಎಂಸಿ ಬಡಾವಣೆ, ತಿಪ್ಪಸಂದ್ರ, ವಿನಾಯಕ ಚಿತ್ರಮಂದಿರ ರಸ್ತೆ, ಕೈಗಾರಿಕಾ ಪ್ರದೇಶ, ಈಶ್ವರ ಬಡಾವಣೆ, ಸದಾನಂದಪ್ಪ , ಕಾಂಪೌಂಡ್, ಶಾರದಾ ನಗರ, ಶಿವಶಕ್ತಿ ನಗರ, ಚುಂಚಘಟ್ಟ ರಸ್ತೆಯ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.