ADVERTISEMENT

ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಬಿ.ಕೆ. ರವಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 16:30 IST
Last Updated 26 ಮಾರ್ಚ್ 2024, 16:30 IST

ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಕೊಪ್ಪಳ ವಿವಿ ಕುಲಪತಿ ಬಿ.ಕೆ. ರವಿ ಮರು ಆಯ್ಕೆಯಾಗಿದ್ದಾರೆ.

ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪದಾಧಿಕಾರಿಗಳ ವಿವರ:

ADVERTISEMENT

ಹಿರಿಯ ಉಪಾಧ್ಯಕ್ಷ–ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ. ಉಪಾಧ್ಯಕ್ಷರು – ಮಮತಾ (ಮೈಸೂರು), ಶೈಲಶ್ರೀ (ಬೆಂಗಳೂರು), ಜೆ.ಎಂ.ಚಂದುನವರ (ಧಾರವಾಡ), ಓಂಕಾರ ಕಾಕಡೆ (ವಿಜಯಪುರ). ಪ್ರಧಾನ ಕಾರ್ಯದರ್ಶಿ–ಪ್ರಶಾಂತ(ಬೆಂಗಳೂರು), ಕಾರ್ಯದರ್ಶಿ – ಭಾಸ್ಕರ ಹೆಗಡೆ(ಉಜಿರೆ), ಖಜಾಂಚಿ- ಟಿ.ಶಾರದಾ(ಬೆಂಗಳೂರು). ಮಾಧ್ಯಮ ಸಂಯೋಜಕ –ರಾಜೇಶ್ವರಿ ತಾರಕೇಶ್ (ಬೆಂಗಳೂರು),ಸಂಘಟನಾ ಕಾರ್ಯದರ್ಶಿಗಳು –ಬಿ.ಟಿ.ಮುದ್ದೇಶ
(ತುಮಕೂರು), ವಾಹಿನಿ ಅರವಿಂದ
(ಬೆಂಗಳೂರು), ರಾಕೇಶ ತಾಳೀಕೋಟೆ (ಬಳ್ಳಾರಿ), ಶಿವಕುಮಾರ ಕಣಸೋಗಿ
(ದಾವಣಗೆರೆ), ಸತೀಶಕುಮಾರ (ಶಿವಮೊಗ್ಗ), ಜೀವರಾಜ (ಬೆಂಗಳೂರು).
ಕಾರ್ಯಕಾರಿ ಸಮಿತಿ ಸದಸ್ಯರು– ಮಹೇಶ,
ಜೆನಿನ್, ರಾಘವೇಂದ್ರ, ಭಾಗ್ಯಲಕ್ಷ್ಮಿ ಪದಕಿ
(ಎಲ್ಲ ಬೆಂಗಳೂರು), ಪುಟ್ಟಸ್ವಾಮಿ, ತೇಜಸ್ವಿ
ನವಿಲೂರ (ಇಬ್ಬರೂ ಮೈಸೂರು), ಸೌಮ್ಯಾ
(ಮಂಗಳೂರು), ತಹಮೀನಾ ಕೋಲಾರ (ವಿಜಯಪುರ), ವಿಜಯ(ಕೋಲಾರ), ಸಿಬಂತಿ ಪದ್ಮನಾಭ (ತುಮಕೂರು), ಸಿ.ಎಸ್.ಮಂಜುಳಾ (ಹಾಸನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.