ಬೆಂಗಳೂರು: ‘ಭೂಗಳ್ಳರು ಪರಿಹಾರ ಪಡೆಯಲು ಅನುಕೂಲ ಮಾಡಿಕೊಟ್ಟ ನಗರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಎಸ್.ಎಂ.ಶಿವಕುಮಾರ್ ಅವರನ್ನು ಅಮಾನತು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಒತ್ತಾಯಿಸಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಬೇಗೂರು ಮುನಿರಾಜು, ‘ಶಿವಕುಮಾರ್ ಅವರು ಈ ಹಿಂದೆ ದಕ್ಷಿಣ ತಹಶೀಲ್ದಾರ್ ಆಗಿದ್ದರು. ಬೇಗೂರು ಹೋಬಳಿಯ ಎಳ್ಳುಕುಂಟೆ ಗ್ರಾಮದ ಸರ್ಕಾರಿ ಜಾಗ ಸರ್ವೆ ನಂ.13 ರಲ್ಲಿ 12 ಎಕರೆಯನ್ನು ಬಿಡಿಎ ವಶಪಡಿಸಿ
ಕೊಂಡಿತ್ತು. ಭೂಗಳ್ಳರ ಜೊತೆ ಸೇರಿ ವಾರಸುದಾರರಲ್ಲದವರಿಗೆ ಹಣ ಮಂಜೂರು ಮಾಡಿಸಿದ್ದಾರೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.