ಬೆಂಗಳೂರು: ಮೈಸೂರು– ಕಾಚಿಗುಡ ಸೂಪರ್ ಪಾಸ್ಟ್ ಎಕ್ಸ್ಪ್ರೆಸ್ ಬೈಯಪ್ಪನಹಳ್ಳಿ ಬಳಿ ಚಲಿಸುತ್ತಿದ್ದಾಗ 2 ಬೋಗಿಗಳ ಕೊಂಡಿ ಕಳಚಿ ಕೆಲಕಾಲ ಆತಂಕ ಸೃಷ್ಟಿಯಾಯಿತು.
ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಕಾಚಿಗುಡ ಹೊರಟಿದ್ದ ರೈಲು ಶುಕ್ರವಾರ ಸಂಜೆ ಬೈಯಪ್ಪನಹಳ್ಳಿ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಾಗ 8 ಮತ್ತು 9ನೇ ಬೋಗಿ ನಡುವೆ ಸಂಪರ್ಕ ಕೊಂಡಿ ಕಳಚಿಕೊಂಡಿತು. ಕೂಡಲೇ ಚಾಲಕ ರೈಲು ನಿಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.