ADVERTISEMENT

ಜನಪ್ರತಿನಿಧಿಗಳಿಂದ ವಂಚಕ ಕಂಪನಿಗಳಿಗೆ ಶ್ರೀರಕ್ಷೆ: ರವಿಕೃಷ್ಣಾ ರೆಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 19:54 IST
Last Updated 30 ನವೆಂಬರ್ 2019, 19:54 IST
ಡಾ.ಅಬ್ದುಲ್ ಸುಭಾನ್ ಪರ ರವಿ ಕೃಷ್ಣಾರೆಡ್ಡಿ ಪ್ರಚಾರ ನಡೆಸಿದರು
ಡಾ.ಅಬ್ದುಲ್ ಸುಭಾನ್ ಪರ ರವಿ ಕೃಷ್ಣಾರೆಡ್ಡಿ ಪ್ರಚಾರ ನಡೆಸಿದರು   

ಬೆಂಗಳೂರು: ‘ರಾಜ್ಯದ ಪ್ರಮುಖ ಪಕ್ಷಗಳ ಜನಪ್ರತಿನಿಧಿಗಳು ಎನಿಸಿಕೊಂಡವರು ವಂಚಕ ಕಂಪನಿಗಳಿಗೆ ಶ್ರೀರಕ್ಷೆಯಾಗಿ ನಿಂತಿದ್ದಾರೆ’ ಎಂದುಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದರು.

ಶಿವಾಜಿನಗರ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾದಡಾ.ಅಬ್ದುಲ್ ಸುಭಾನ್ ಪರ‍ಪ್ರಚಾರ ನಡೆಸಿ, ‘ಕಂಪನಿಗಳಿಂದ ನಡೆಯು
ತ್ತಿರುವ ವಂಚನೆ ಪ್ರಕರಣಗಳಲ್ಲಿ ಜನಪ್ರತಿನಿಧಿಗಳು ನೇರಪಾಲುದಾರರಾಗಿದ್ದಾರೆ. ಇದರಿಂದರಾಜ್ಯದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ.ಈ ಬಗ್ಗೆ ನಮ್ಮ ಪಕ್ಷ ವಂಚಿತರ ಪರವಾಗಿ ನ್ಯಾಯಾಲಯದ ಒಳಗೆ ಮತ್ತು ಹೊರಗೆ ನಿರಂತರ ಹೋರಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT