ಬೆಂಗಳೂರು: ಬಸ್ ಪ್ರಯಾಣಿಕರೊಬ್ಬರ ಗಮನವನ್ನು ಬೇರೆಡೆಗೆ ಸೆಳೆದು ಬ್ಯಾಗಿನಲ್ಲಿದ್ದ ₹ 80 ಸಾವಿರ ಹಣವನ್ನು ಇಬ್ಬರು ಅಪರಿಚಿತರು ದೋಚಿದ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹಾಸನದ ಪ್ರೇಮಾ ಹಣ ಕಳೆದುಕೊಂಡವರು. ನಗರದಲ್ಲಿರುವ ಮಗಳ ಮನೆಗೆ ಬಂದಿದ್ದ ಪ್ರೇಮಾ, ಹಾಸನಕ್ಕೆ ಮರಳಲು ಬಸ್ ನಿಲ್ದಾಣಕ್ಕೆ ಬಂದ ವೇಳೆ ಈ ಘಟನೆ ನಡೆದಿದೆ.
‘ಬಸ್ನಲ್ಲಿ ಕುಳಿತಿದ್ದ ನಾನು, ಬ್ಯಾಗ್ನ್ನು ಕಾಲಿನ ಕೆಳಗೆ ಇಟ್ಟಿದ್ದೆ. ಅದೇ ಬಸ್ಗೆ ಹತ್ತಿದ್ದ ಇಬ್ಬರ ಪೈಕಿ ಒಬ್ಬ ಚಿಲ್ಲರೆ ಹಣವನ್ನು ನಾನು ಕುಳಿತಿದ್ದ ಸೀಟಿನಡಿಗೆ ಬಿಸಾಕಿದ್ದ. ಮತ್ತೊಬ್ಬ ನನ್ನ ಬ್ಯಾಗ್ನ್ನು ಲಗೇಜ್ ಕ್ಯಾರಿಯರ್ನಲ್ಲಿ ಇಡುವುದಾಗಿ ಹೇಳಿ, ಬಳಿಕ ಚಿಲ್ಲರೆ ಹಣ ಹೆಕ್ಕಿಕೊಂಡು ಬಸ್ಸಿನಿಂದ ಇಳಿದು ಹೋಗಿದ್ದ. ಕೆಲಹೊತ್ತಿನ ಬಳಿಕ ನಾನು ಬ್ಯಾಗ್ ಪರಿಶೀಲಿಸಿದಾಗ, ಅದರೊಳಗಿದ್ದ ₹ 80 ಸಾವಿರ ನಾಪತ್ತೆಯಾಗಿತ್ತು’ ಎಂದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಪ್ರೇಮಾ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.