ADVERTISEMENT

ನೇಪಾಳದಲ್ಲಿ ರೌಡಿ ಕರಿಯ ಸೆರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 20:01 IST
Last Updated 15 ಜೂನ್ 2021, 20:01 IST
ಕರಿಯಾ
ಕರಿಯಾ   

ಬೆಂಗಳೂರು: ಕುಖ್ಯಾತ ರೌಡಿ ಸೈಕಲ್ ರವಿ, ಆತನ ಸಹಚರ ಬೇಕರಿ ರಘು ಹಾಗೂ ಸಿನಿಮಾ ನಿರ್ಮಾಪಕ ಉಮಾಪತಿ ಅವ
ರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ರೌಡಿ ಕರಿಯ ಅಲಿಯಾಸ್ ರಾಜೇಶ್‌ನನ್ನು ಜಯನಗರ ಪೊಲೀಸರು ನೇಪಾಳದಲ್ಲಿ ಬಂಧಿಸಿದ್ದಾರೆ.

‘ಮಾರಕಾಸ್ತ್ರಗಳ ಸಮೇತ ಕೊಲೆ ಮಾಡಲು ಸಜ್ಜಾಗಿದ್ದ ರೌಡಿ ಬಾಂಬೆ ರವಿ ಗ್ಯಾಂಗ್ ಮೇಲೆ 2020ರ ಡಿಸೆಂಬರ್ 20ರಂದು ನ್ಯಾಷನಲ್ ಕಾಲೇಜು ಬಳಿ ದಾಳಿ ಮಾಡಲಾಗಿತ್ತು. ಕೆಲ ಆರೋಪಿಗಳು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಂಬೆ ರವಿಯ ಸಹಚರ ಕರಿಯ, ನೇಪಾಳಕ್ಕೆ ಹೋಗಿ ತಲೆಮರೆಸಿಕೊಂಡಿ
ದ್ದ. ಈ ಬಗ್ಗೆ ಮಾಹಿತಿ ಪಡೆದ ವಿಶೇಷ
ತಂಡವು ನೇಪಾಳಕ್ಕೆ ಹೋಗಿ ಆರೋಪಿ
ಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.’

ADVERTISEMENT

‘ಕೆ.ಜಿ.ನಗರ ನಿವಾಸಿಯಾಗಿದ್ದ ಕರಿಯ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ಜೀವ ಬೆದರಿಕೆ, ಅಕ್ರಮ ಶಸ್ತ್ರಾಸ್ತ್ರ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೆ.ಜಿ. ನಗರ ಪೊಲೀಸ್‌ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿತ್ತು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.