ADVERTISEMENT

ಎಸ್‌ಜೆಐಎಂ:ಪಿಜಿಡಿಎಂಗೆ ರಜತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 20:26 IST
Last Updated 22 ಮಾರ್ಚ್ 2021, 20:26 IST
ಕಾರ್ಯಕ್ರಮವನ್ನು (ಎಡದಿಂದ ಐದನೆಯವರು) ಅನಿಲ್ ಡಿ.ಸಹಸ್ರಬುದ್ಧೆ ಉದ್ಘಾಟಿಸಿದರು. ಯೇಸು ಸಭೆಯ ಕರ್ನಾಟಕದ ಪ್ರಾಂತ್ಯಾಧಿಕಾರಿ ಫಾ.ಡೈನೇಸಿಯಸ್‌ ವಾಝ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಡಿಸೋಜ, ಶಾಸಕ ಎನ್.ಎ.ಹ್ಯಾರಿಸ್ ಹಾಗೂ ಕಮಲ್ ಬಾಲಿ ಇದ್ದಾರೆ.
ಕಾರ್ಯಕ್ರಮವನ್ನು (ಎಡದಿಂದ ಐದನೆಯವರು) ಅನಿಲ್ ಡಿ.ಸಹಸ್ರಬುದ್ಧೆ ಉದ್ಘಾಟಿಸಿದರು. ಯೇಸು ಸಭೆಯ ಕರ್ನಾಟಕದ ಪ್ರಾಂತ್ಯಾಧಿಕಾರಿ ಫಾ.ಡೈನೇಸಿಯಸ್‌ ವಾಝ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಡಿಸೋಜ, ಶಾಸಕ ಎನ್.ಎ.ಹ್ಯಾರಿಸ್ ಹಾಗೂ ಕಮಲ್ ಬಾಲಿ ಇದ್ದಾರೆ.   

ಬೆಂಗಳೂರು: ನಗರದ ಸೇಂಟ್ ಜೋಸೆಫ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ (ಎಸ್‌ಜೆಐಎಂ) ಪಿಜಿಡಿಎಂ ಕಾರ್ಯಕ್ರಮವು 25 ವರ್ಷಗಳನ್ನು ಪೂರೈಸಿತು.

ಇದರ ಅಂಗವಾಗಿ ನಡೆದ ‌ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿದ್ದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುದ್ಧೆ, ‘ಎಐಸಿಟಿಇ ಶಿಕ್ಷಣದಲ್ಲಿ ನೈತಿಕ ಮಾದರಿ ಹೊಂದಿದೆ. ಇದರಡಿ ಸಾಂಸ್ಕೃತಿಕ ಮತ್ತು ಸಾಮಾಜಿಕ-ಆರ್ಥಿಕ ಸಂದರ್ಭದಲ್ಲಿ ಗುಣಮಟ್ಟದ ಸೂಚನೆಗಳನ್ನು ನೀಡಲಾಗುತ್ತದೆ’ ಎಂದರು.

ವೋಲ್ವೊ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ, ‘ಸಾಂಕ್ರಾಮಿಕ-ನಂತರದ ಜಗತ್ತು ಭಾರತಕ್ಕೆ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಒಂದು ಸುವರ್ಣಾವಕಾಶ ಒದಗಿಸಿದೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಎಸ್‌ಜೆಐಎಂ ಶ್ರೇಷ್ಠ ಸಾಮಾಜಿಕ ಉದ್ಯಮಿ ಪ್ರಶಸ್ತಿಯನ್ನು ಟೀಚ್ ಫಾರ್ ಇಂಡಿಯಾ ಸಂಸ್ಥೆಗೆ ನೀಡಲಾಯಿತು. ಪಿಜಿಡಿಎಂ ಕಾರ್ಯಕ್ರಮದ 60 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರ ಅಧ್ಯಯನಕ್ಕೆ ನೆರವಾಗಲು ₹95 ಲಕ್ಷಗಳ ವಿದ್ಯಾರ್ಥಿವೇತನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.